Tuesday 2 December 2014

ಸ್ಕೂಲ್ ಪ್ರವೇಶೋತ್ಸವ ಕಾರ್ಯಕ್ರಮ 2015-16


ಪಶುಸಂಗೋಪನಾ ಇಲಾಖೆಯ ವತಿಯಿಂದ ಉಚಿತ ಕೋಳಿ ವಿತರಣೆ


ಪಶುಸಂಗೋಪನಾ ಇಲಾಖೆಯ ವತಿಯಿಂದ ಉಚಿತ ಕೋಳಿ ವಿತರಣಾ ಕಾರ್ಯಕ್ರಮವು ತಾ| 02/12/2014 ರಂದು ಎಸ್..ಟಿ ಶಾಲೆಯಲ್ಲಿ ಜರುಗಿತು. ವೆಟರ್ನರಿ ಹೋಸ್ಪಿಟಲ್,ಮಂಜೇಶ್ವರದ ಡಾ| ಬಾಲಚಂದ್ರ ರಾವ್ ಕೋಳಿಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಕೋಳಿಗಳಿಗಿರುವ ಆಹಾರದ ಕಿಟ್ ನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಶ್ಯಾಮಕೃಷ್ಣ ಪ್ರಕಾಶ್,ಶ್ರೀ ಲಕ್ಷ್ಮೀದಾಸ್ ಪ್ರಭು ಉಪಸ್ಥಿತರಿದ್ದರು.ಶ್ರೀಮತಿ ಸರ್ವೇಶ್ವರಿ ಟೀಚರ್ ಸ್ವಾಗತಿಸಿ, ಶ್ರೀಮತಿ ಸುಮತಿ ಟೀಚರ್ ವಂದಿಸಿದರು.ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. 50ವಿದ್ಯಾರ್ಥಿಗಳಿಗೆ 5 ರಂತೆ 250 ಕೋಳಿಗಳನ್ನು ವಿತರಿಸಲಾಯಿತು.

Monday 1 December 2014

ಉತ್ತಮ ಸ್ವಯಂಸೇವಕರು


ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಇತ್ತೀಚಿಗೆ ಜರುಗಿದ ಷಷ್ಠೀ ಜಾತ್ರೆಯಲ್ಲಿ ನಮ್ಮ ಶಾಲಾ ಗೈಡ್ ದಳದವರು ಸ್ವಯಂಸೇವಕರಾಗಿ ಕರ್ತವ್ಯವನ್ನು ನಿರ್ವಹಿಸಿದರು.

"ವಿಶ್ವ ಏಡ್ಸ ದಿನಾಚರಣೆ"


"ವಿಶ್ವ ಏಡ್ಸ ದಿನಾಚರಣೆ"ಯ ಅಂಗವಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಮಂಜೇಶ್ವರ ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ಇಂದು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.ನಮ್ಮ ಶಾಲಾ ಪ್ರಬಂಧಕರಾದ ಶ್ರೀ ದಿನೇಶ್ ಶೆಣೈಯವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ, ಮಂಜೇಶ್ವರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Saturday 29 November 2014

ಪತ್ರಿಕೆಯಲ್ಲಿ ಅರಳಿದ ಅದ್ಭುತ ಚಿತ್ರಕಾರ


"ಬೆಳಿಯ ಸಿರಿ ಮೊಳಕೆಯಲ್ಲಿ' ಎಂಬ ಮಾತಿನಂತೆ ಇಲ್ಲಿ ಒಂದು ಬಾಲ ಪ್ರತಿಭೆಯು ತನ್ನ ಕೈಚಳಕದಿಂದ ಅದ್ಭುತವಾದ ಚಿತ್ರಗಳನ್ನು ರಚಿಸುವುದು ಮಾತ್ರವಲ್ಲದೇ ಪತ್ರಿಕೆಗಳಲ್ಲೂ ತನ್ನ ಚಿತ್ರಗಳನ್ನು ಪ್ರಕಟಿಸುವುದರ ಮೂಲಕ ಅದ್ಭುತವಾದ ಕೆಲಸವನ್ನು ಮಾಡುತ್ತಿದ್ದಾನೆ. ಈತನ ಹೆಸರು ರಜತ್.ಕೆ ಪ್ರಸ್ತುತ ನಮ್ಮ ಶಾಲೆಯ 8ನೇ ತರಗತಿಯಲ್ಲಿ ಕಲಿಯುತ್ತಿದ್ದು ,ಶ್ರೀ ವೆಂಕಟೇಶ್.ಕೆ ಹಾಗೂ ಶ್ರೀಮತಿ ಹರಿಣಾಕ್ಷಿ ಜಂಪತಿಗಳ ದ್ವಿತೀಯ ಪುತ್ರನಾಗಿದ್ದಾನೆ.. ಉಜ್ವಲ ಭವಿಷ್ಯ ಇವನದಾಗಲಿ ಎಂದು ಶುಭ ಹಾರೈಕೆ ನಮ್ಮದು.

Friday 21 November 2014

ಭಾಸ್ಕರಾಚಾರ್ಯ ಸೆಮಿನಾರ್ ಪ್ರಸಂಟೇಶನ್ ಹಾಗೂ ರಾಮಾನುಜನ್ ಪೇಪರ್ ಪ್ರಸಂಟೇಶನ್ ನಲ್ಲಿ ಮಿಂಚಿದ ಪ್ರತಿಭೆಗಳು

 
ಮಂಜೇಶ್ವರ ಬಿ.ಆರ್.ಸಿಯಲ್ಲಿ ತಾರೀಕು 21-11-2014 ರಂದು ಜರುಗಿದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಭಾಸ್ಕರಾಚಾರ್ಯ ಸೆಮಿನಾರ್ ಮಂಡನೆಯಲ್ಲಿ ನಮ್ಮ ಶಾಲಾ ಯು.ಪಿ ವಿಭಾಗದ ಮಾಸ್ಟರ್ ಗಿರೀಶ್.ಕೆ ಗಣಿತ ಶಾಸ್ತ್ರಕ್ಕೆ ಕೇರಳ ಗಣಿತ ಶಾಸ್ತ್ರಜ್ಞರ ಕೊಡುಗೆ ಎಂಬ ವಿಷಯದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಇವನು ಪ್ರಸಕ್ತ 7ನೇ ತರಗತಿ ವಿಧ್ಯಾರ್ಥಿಯಾಗಿದ್ದು ಶ್ರೀ ಜಯರಾಮ್ ಕಾರಂತ್ ಹಾಗೂ ಶ್ರೀಮತಿ ಮಮತಾ ದಂಪತಿಗಳ ಸುಪುತ್ರನಾಗಿದ್ದಾನೆ.



ಮಂಜೇಶ್ವರ ಬಿ.ಆರ್.ಸಿಯಲ್ಲಿ ತಾರೀಕು 21-11-2014 ರಂದು ಜರುಗಿದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ರಾಮಾನುಜನ್ ಪೇಪರ್ ಪ್ರಸಂಟೇಶನ್ ನಲ್ಲಿ ನಮ್ಮ ಶಾಲಾ ಹೈಸ್ಕೂಲ್ ವಿಭಾಗದ ಕುಮಾರಿ ಬದ್ರುನ್ನೀಸಾ"ಅಭಿನ್ನಕ ಸಂಖ್ಯೆಗಳು' (Irrationals) ಎಂಬ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ.ಇವಳು ಪ್ರಸಕ್ತ 10ನೇ ತರಗತಿ ವಿಧ್ಯಾರ್ಥಿನಿಯಾಗಿದ್ದು ಶ್ರೀ ಅಬ್ದುಲ್ ಸಲಾಂ ಹಾಗೂ ಶ್ರೀಮತಿ ಬೀಫಾತಿಮಾ ದಂಪತಿಗಳ ಪುತ್ರಿಯಾಗಿದ್ದಾಳೆ.


Wednesday 19 November 2014

ಮಂಜೇಶ್ವರ ಉಪ ಜಿಲ್ಲಾ ಕ್ರೀಡೋತ್ಸವದಲ್ಲಿ ಮಿಂಚಿದ ಪ್ರತಿಭೆ


ತಾರೀಕು 06-11-2014ರಂದು ಜರುಗಿದ ಮಂಜೇಶ್ವರ ಉಪ ಜಿಲ್ಲಾ ಕ್ರೀಡೋತ್ಸವದಲ್ಲಿ ನಮ್ಮ ಶಾಲೆಯ ಮಾಸ್ಟರ್ ಸೆಕೀರ್ ಎಂ.ಎ ಯು 3000ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾನೆ.ಆಟದ ಮೈದಾನದಲ್ಲಿ ಪ್ರಶಸ್ತಿಯನ್ನು ಗಳಿಸುವ ದೃಶ್ಯ

ಮಂಜೇಶ್ವರ ಉಪ ಜಿಲ್ಲಾ ಕ್ರೀಡೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು

ಡಿಸ್ಕಸ್ ತ್ರೋನಲ್ಲಿ ಸೀನಿಯರ್ ಬಾಯ್ಸ್  ವಿಭಾಗದಲ್ಲಿ ತೃತೀಯ ಸ್ಥಾನ ರಿತೇಶ್.ವಿ 10ನೇ ತರಗತಿ.
ಹೈಜಂಪ್ ನಲ್ಲಿ ಜೂನಿಯರ್ ಬಾಯ್ಸ್ ವಿಭಾಗದಲ್ಲಿ  ದ್ವಿತೀಯ ಸ್ಥಾನ ಸೊಹಮ್ಮದ್ ಜಾಬೀರ್ 10ನೇ ತರಗತಿ.
 ಡಿಸ್ಕಸ್ ತ್ರೋನಲ್ಲಿ ಸೀನಿಯರ್ ಬಾಯ್ಸ್  ವಿಭಾಗದಲ್ಲಿ ದ್ವಿತೀಯ ಸ್ಥಾನ ಅಬುಬಕ್ಕರ್ ಸಿದ್ಧಿಕ್  10ನೇ ತರಗತಿ.
 ಡಿಸ್ಕಸ್ ತ್ರೋನಲ್ಲಿ ಜೂನಿಯರ್ ಬಾಯ್ಸ್  ವಿಭಾಗದಲ್ಲಿ ದ್ವಿತೀಯ ಸ್ಥಾನ,ಜೂನಿಯರ್ ಬಾಯ್ಸ್ ರಿಲೇನಲ್ಲಿ ದ್ವಿತೀಯ ಸ್ಥಾನ ಪಡೆದ  ಅಬ್ದುಲ್ ಸೆಬೀರ್ 10ನೇ ತರಗತಿ.

Sunday 16 November 2014

ದಿ | ಶ್ರೀ ಶಿವಾನಂದ ಅರಿಬೈಲ್ ಸ್ಮರಣಾರ್ಥ ಅತ್ಯುತ್ತಮ ಸ್ಕಾಟ್ ಹಾಗೂ ಗೈಡ್ ಪ್ರಶಸ್ತಿ 2014

ನಮ್ಮೀ ವಿದ್ಯಾ  ಸಂಸ್ಥೆಯಲ್ಲಿ 13-7-2000 ದಿಂದ ಅಧ್ಯಾಪಕರಾಗಿ ಹಾಗೂ ನಮ್ಮೀ ಸಂಸ್ಥೆಯ ಸ್ಕೌಟ್ ದಳದ ಶಿಕ್ಷಕರಾಗಿ ಇತ್ತೀಚಿಗೆ 07-10-2014 ರಂದು ಸ್ವರ್ಗಸ್ಥರಾದ ದಿ|ಶಿವಾನಂದ ಅರಿಬೈಲು ಇವರ ಸ್ಮರಣಾರ್ಥವಾಗಿ ನಮ್ಮ ಶಾಲಾ ಸಿಬ್ಬಂದಿ ವರ್ಗದವರು ಪ್ರಾಯೋಜಿಸಿದ   ಅತ್ಯುತ್ತಮ ಸ್ಕೌಟ್ ಹಾಗೂ ಗೈಡ್ ಪ್ರಶಸ್ತಿ 2014ರ ಪ್ರಶಸ್ತಿ ಪ್ರಧಾನ ತಾ |15-11-2014 ರಂದು ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾಡಲಾಯಿತು.

ಅತ್ಯುತ್ತಮ ಗೈಡ್ ಪ್ರಶಸ್ತಿ 2014 : ಕುಮಾರಿ ನಿಶ್ಮಿತಾ ಡಿ.ಹೆಚ್ 10.ಎ ತರಗತಿ


ಕುಮಾರಿ ನಿಶ್ಮಿತಾ ಡಿ.ಹೆಚ್ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ಇವರಿಂದ ಪ್ರಶಸ್ತಿಯನ್ನು ಪಡೆಯುತ್ತಿರುವುದು.

  ಅತ್ಯುತ್ತಮ ಸ್ಕೌಟ್  ಪ್ರಶಸ್ತಿ 2014 : ಮಾಸ್ಟರ್  ಶೈಲೇಶ್ 10.ಎ ತರಗತಿ


ಕಲೋತ್ಸವದ ಗುಂಪು ನೃತ್ಯದ ವೀಡಿಯೋಗಳು

Saturday 15 November 2014

ಸಾಧನಾ ಶ್ರೇಷ್ಠರಿಗೆ ನಗದು ಪುರಸ್ಕಾರ

ತಾ |15-11-2014ರಂದು ಶಾಲಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಕಳೆದ ವರ್ಷದ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿನಿಯರನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
 ಪ್ರಥಮ ಸ್ಥಾನ : ಅನುಷಾ.ಪಿ  ನಗದು ಪುರಸ್ಕಾರ : 5496/- (ರೂಪಾಯಿ ಐದು ಸಾವಿರದ ನಾನ್ನೂರ ತೊಂಭತ್ತಾರು).
ಅನುಷಾ.ಪಿ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು.  
 ಪ್ರಥಮ ಸ್ಥಾನ : ಲಾವಣ್ಯ.ಆರ್  ನಗದು ಪುರಸ್ಕಾರ : 5302/- (ರೂಪಾಯಿ ಐದು ಸಾವಿರದ ಮುನ್ನೂರ ಎರಡು).


ಲಾವಣ್ಯ.ಆರ್ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು.

ದ್ವಿತೀಯ ಸ್ಥಾನ : ಮಾಧುರಿ  ನಗದು ಪುರಸ್ಕಾರ : 2453/- (ರೂಪಾಯಿ ಎರಡು ಸಾವಿರದ ನಾನ್ನೂರ ಐವತ್ತಮೂರು).

ಮಾಧುರಿ ನಮ್ಮ ಶಾಲಾ ಪ್ರಭಂದಕರಾದ ಶ್ರೀ ದಿನೇಶ್ ಶೆಣೈಯವರಿಂದ ನಗದು ಪುರಸ್ಕಾರ ಪಡೆಯುತ್ತಿರುವುದು.

ಶಾಲಾ ಕಲೋತ್ಸವದ ಪಲಿತಾಂಶ ಯು.ಪಿ ವಿಭಾಗ ಹಾಗೂ ಹೈಸ್ಕೂಲ್ ವಿಭಾಗ

H.S SECTION RESULT

ಹಳೇ ವಿಧ್ಯಾರ್ಥಿಯಾದ ಶ್ರೀ ಮೊಹಮ್ಮದ್ ಮುಸ್ತಾಫಾರಿಂದ ಸುಮಧುರ ಮಾಪಿಳ್ಳ ಪಾಟ್ಟು


View all
Get your own

ವೀಡಿಯೋಗೆ ಕ್ಲಿಕ್ ಮಾಡಿ MAPILLA PATTU BY MOHAMMAD MUSTHAFA

ಪ್ರೀ ಪ್ರೈಮರಿ ವಿಭಾಗದ ಕುಮಾರಿ ಸಾನ್ವಿಯ ಅತ್ಯಾಕರ್ಷಕ ನೃತ್ಯದ ಭಂಗಿ ಹಾಗೂ ಅಭಿನಂಧನೆ

S.S.L.C SUBJECT WISE TOPER PRIZES AWARDED


ಕನ್ನಡ ಪಂಡಿತ್ ದಿ | ಶ್ರೀ ಟಿ.ವಿಟ್ಟಪ್ಪ ಶೆಣೈ ಸ್ಮಾರಕ ವಿದ್ಯಾರ್ಥಿ ವೇತನ (ಕನ್ನಡದಲ್ಲಿ ಅತ್ಯುತ್ತಮ ಮಾರ್ಕುಗಳಿಸಿದವರಿಗೆ 1 ನೇ ಕ್ಲಾಸಿನಿಂದ 9ನೇ ತರಗತಿಯವರೆಗೆ )

ದಿ | ಶ್ರೀಮತಿ ರಾಜೀವಿ ಬಾಯಿ ಮತ್ತು ದಿ | ಶ್ರೀ ಅಯ್ತ ಪೈ ಸ್ಮಾರಕ ವಿದ್ಯಾರ್ಥಿವೇತನ ವಿತರಣೆ


GENERAL PROFICIENCY PRIZES FOR 8TH AND 9TH STANDARD AWARDED


GENERAL PROFICIENCY AND CONDUCT PRIZES AWARDED


ಕಲೋತ್ಸವದಲ್ಲಿ ಅತ್ಯುತ್ತಮ ಸಾಧನೆಗೈದ ಕ್ಲಾಸುಗಳಿಗೆ ಪ್ರಶಸ್ತಿ ಫಲಕ

ಕಲೋತ್ಸವದಲ್ಲಿ ಅತ್ಯುತ್ತಮ ಸಾಧನೆಗೈದ ಕ್ಲಾಸುಗಳಿಗೆ ಪ್ರಶಸ್ತಿ ಫಲಕ ವನ್ನು ನೀಡಿ ಗೌರವಿಸಲಾಯಿತು.

ಎಸ್.ಎ.ಟಿ ಪ್ರೌಢ ಶಾಲೆಯಲ್ಲಿ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭ


ಮಂಜೇಶ್ವರ ಸ್ಥಳೀಯ ಎಸ್..ಟಿ ಪ್ರೌಢ ಶಾಲೆಯಲ್ಲಿ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವು ನವೆಂಬರ್ 15 ರಂದು ಜರುಗಿತು. ಶಾಲಾ ಪ್ರಬಂಧಕರಾದ ಶ್ರೀ .ಎಂ ದಿನೇಶ್ ಶೆಣೈ ಅಧ್ಯಕ್ಷತೆಯನ್ನು ವಹಿಸಿ ಹಿತವಚನವನ್ನು ನೀಡಿದರು. ಆನಂತರ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು.ಪ್ರಸ್ತುತ ಸಾಲಿನ ತರಗತಿಯ ಉತ್ತಮ ಸಾಧಕರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.. ವೇದಿಕೆಯಲ್ಲಿ ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈ , ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್,ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸುದತಿ.ಬಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅಗಲಿದ ಸ್ಕೌಟ್ ಅಧ್ಯಾಪಕರಾದ ಮತ್ತು ಸಮಾಜ ವಿಜ್ಞಾನ ಅಧ್ಯಾಪಕರೂ ಆದ ಶಿವಾನಂದ ಅರಿಬೈಲ್ ಅವರಿಗೆ ಸಂತಾಪ ಸೂಚಿಸಲಾಯಿತು. 9ನೇ ತರಗತಿಯ ವಿದ್ಯಾರ್ಥಿನಿಯಾದ ಆಯಿಷತ್ ಸಫ್ವಾನ ಸ್ವಾಗತಿಸಿ ಶಾಲಾ ನಾಯಕಿ ಮಷ್ಮೂಮಾ ವಂದಿಸಿದರು. ಶಾಲಾ ಕಲೋತ್ಸವದ ಸಂಚಾಲಕರಾದ ವಿರೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
View all
Get your own

ವೀಡಿಯೋಗಳಿಗೆ ಕ್ಲಿಕ್ ಮಾಡಿ : 1 VALIIDICTORY FUNCTION PART I

2 VALIDICTORY FUNCTION PART II  

ಪ್ರೀಪ್ರೈಮರಿ ಮಕ್ಕಳ ನೃತ್ಯದ ವೀಡಿಯೋಗಳು

Friday 14 November 2014

ಮಕ್ಕಳ ದಿನಾಚರಣೆ ಅಂಗವಾಗಿ ಚಾಚಾ ನೆಹರು ಚಿತ್ರ ರಚನಾ ಸ್ಪರ್ಧೆ


LATE SMT. RAJEEVI BAI & LATE SRI AITHAPPA PAI MEMORIAL SCHOLARSHIP


Endowment Prize h.s Susheela Padiyar

T.VITTAPPA SHENOY MEMORIAL SCHOLARSHIP FOR TOP SCORERS IN KANNADA SUBJECT

ಪ್ರತಿಭಾ ಪುರಸ್ಕಾರ 2014

To view the Scholarship details which is going to be distributed to the various students on 15-11-2014 at 3.00p.m in the Validictory function of our school Kalolsavam programme.

ವಿಶೇಷ ಪುರಸ್ಕಾರ

ನಮ್ಮೀ ವಿದ್ಯಾಸಂಸ್ಥೆಯಲ್ಲಿ 13-7-2000 ದಿಂದ ಅಧ್ಯಾಪಕರಾಗಿ ಹಾಗೂ ನಮ್ಮೀ ಸಂಸ್ಥೆಯ ಸ್ಕೌಟ್ ದಳದ ಶಿಕ್ಷಕರಾಗಿ ಇತ್ತೀಚಿಗೆ 07-10-2014 ರಂದು ಸ್ವರ್ಗಸ್ಥರಾದ ದಿ|ಶಿವಾನಂದ ಅರಿಬೈಲು ಇವರ ಸ್ಮರಣಾರ್ಥವಾಗಿ ನಮ್ಮ ಶಾಲಾ ಸಿಬ್ಬಂದಿ ವರ್ಗದವರು ಈ ಕೆಳಗಿನ ಸ್ಮರಣಿಕೆಯನ್ನು BEST SCOUT AWARD 2014-2015 ಎಂದೂ BEST GUIDE AWARD 2014-2015 ಎಂದು ಹೆಸರಿಸಿ ನಾಳೆ (15-11-2014) ಅಪರಾಹ್ನ 3.00ಗೆ  ನಡೆಯಲಿರುವ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಈ ಕೆಳಗಿನವರಿಗೆ ನೀಡಿ ಗೌರವಿಸಲಿದ್ದೇವೆ.
ಸಿಬ್ಬಂದಿ ವರ್ಗದವರು,
ಎಸ್.ಎ.ಟಿ ಹೈಸ್ಕೂಲ್,
ಮಂಜೇಶ್ವರ

BEST SCOUT AWARD WINNER 2014


  
MASTER SHAILESH.D 10A


BEST GUIDE AWARD WINNER 2014


KUMARI NISHMITHA. D.H 10A








ಎಸ್.ಎ.ಟಿ ವಿದ್ಯಾಲಯದಲ್ಲಿ ರಕ್ಷಕರ ಸಮ್ಮೇಳನ

ನವೆಂಬರ 14 ನಮ್ಮ ವಿದ್ಯಾಲಯದಲ್ಲಿ ಸರ್ವ ಶಿಕ್ಷಾ ಅಭಿಯಾನ , ಕೇರಳ 2014-2015 ಹಕ್ಕು ಆಧಾರಿತ ಶಾಲೆ ,ಕ್ಲೀನ್ ಸ್ಕೂಲ್,ಸ್ಮಾರ್ಟ ಸ್ಕೂಲ್,ಶಿಶು ಸೌಹಾರ್ದ ಶಾಲೆ ಎಂಬ ಯೋಜನೆಯಡಿಯಲ್ಲಿ ರಕ್ಷಕರ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದ ಉದ್ಘಾಟನೆಗೈದ ಮಂಜೇಶ್ವರ ಪಂಚಾಯತಿನ ವಾರ್ಡ ಮೆಂಬರ್ ಶ್ರೀ ಆನಂದ ಮಾಸ್ಟರ್ ಮಕ್ಕಳ ಪುರೋಗತಿಯಲ್ಲಿ ರಕ್ಷಕರ ಪಾತ್ರದ ಬಗ್ಗೆ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮಾತನಾಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ರಕ್ಷಕರ ಪಾತ್ರ ಹಿರಿದು ಎಂದರು. ಶಿಕ್ಷಕಿ ಸುಕನ್ಯಾ ಕೆ.ಟಿ ಹಾಗೂ ಶಿಕ್ಷಕ ನಾಗೇಶ್ .ವಿ ಗಣಿತ ಚಟುವಟಿಕೆ ನಡೆಸಿಕೊಟ್ಟರು.ರಕ್ಷಕ ಶಿಕ್ಷಕ ಸಂಘದ ಘನ ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈ ಅಧ್ಯಕ್ಷತೆ ವಹಿಸಿ ಪಿ.ಟಿ.ಎ ಕೈಗೊಳ್ಳಲಿರುವ ಕಾರ್ಯಗಳ ಬಗ್ಗೆ ವಿವರ ನೀಡಿದರು.ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಪ್ರಾಸ್ತಾವಿಕ ನುಡಿಗೈದರು. ಕಿರಿಯ ಪ್ರಾಥಮಿಕ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪುತ್ತಬ್ಬ ಕುಂಜತ್ತೂರು,ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಸುದತಿ.ಬಿ ಉಪಸ್ಥಿತರಿದ್ದರು. ಸಿಬ್ಬಂದಿ ಕಾರ್ಯದರ್ಶಿ ಶ್ರೀ ಎನ್.ಜಿ ಹೆಗಡೆ ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ಶ್ರೀ ಪುಂಡಲೀಕ ನಾಯಕ್ ,ಮಹೇಶ್.ಕೆ ರಕ್ಷಕರಿಗೆ ತರಗತಿಗಳನ್ನು ನಡೆಸಿಕೊಟ್ಟರು.ರಕ್ಷಕರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಪುಂಡಲೀಕ ನಾಯಕ್ ರವರು ವಂದನಾರ್ಪಣೆಗೈದರು.

ಮಕ್ಕಳ ದಿನಾಚರಣೆ 2014



ಪ್ರಪಂಚದಲ್ಲಿ ಮಕ್ಕಳ ದಿನ ನವೆಂಬರ್ 20, ಪ್ರತಿವರ್ಷ ಆಚರಿಸಲಾಗುತ್ತದೆ. ಆದರೆ, ಭಾರತದಲ್ಲಿ ಮಕ್ಕಳ ದಿನ 14 ನೇ ನವೆಂಬರ್ ನಲ್ಲಿ ಆಚರಿಸಲಾಗುತ್ತಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮ ದಿನಾಚರಣೆ  . ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತು ಮೋಹ.  ಮಕ್ಕಳ ದಿನ ಅವನ ಜೀವನದಲ್ಲಿ ಅಕ್ಕರೆಯನ್ನು ಗುರುತಿಸಿ ದಿನ ಆಚರಿಸಲಾಗುತ್ತದೆ ಆದುದರಿಂದ ಅವರಿಗೆ ಚಾಚಾ ("ಚಾಚಾ" ಚಿಕ್ಕಪ್ಪ, ತಂದೆ ಕಿರಿಯ ಸಹೋದರ ಅರ್ಥ) ಎಂದು ಹೆಸರು ಬಂದಿರುವುದು.
ಮಕ್ಕಳ ದಿನ ವಿಶೇಷವಾಗಿ ಶಾಲಾ ಮಟ್ಟದಲ್ಲಿ, ಭಾರತದಾದ್ಯಂತ ಆಚರಿಸಲಾಗುತ್ತದೆ. ನೈಜ ಆರ್ಥದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಿದರೆ ಆಗ ನಿಜವಾಗಿಯೂ ನೆಹರೂರವರಿಗೆ ನಾವು ಸಲ್ಲಿಸುವ ಗೌರವವು ಸಲ್ಲುತ್ತದೆ.
ಎಲ್ಲಾ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು..........
              ನಮ್ಮ ಶಾಲೆಯಲ್ಲಿ ದಿ | ಪಂಡಿತ್ ಜವಾಹರ್ ಲಾಲ್ ನೆಹರು ರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಯಿತು. ಇದರ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮಾ ಕಿಣಿ ಅವರು ವಹಿಸಿದ್ದು ಮಕ್ಕಳಿಗೆ ಶುಭವನ್ನು ಕೋರಿದರು. ದಿನದ ಮಹತ್ವದ ಬಗ್ಗೆ ಶಾಲಾ ಶಿಕ್ಷಕರಾದ ಶ್ರೀ ಗಣೇಶ್ ಪ್ರಸಾದ್ ನಾಯಕ್ ರವರು ತಿಳಿಸಿದರು. ವಿಧ್ಯಾರ್ಥಿಗಳ ಪರವಾಗಿ ಶೋಹಿಬತ್ ಅಸ್ಲಾಮಿಯಾ , ಹಾಗೂ ನೇತ್ರಾವತಿ ಮಕ್ಕಳ ದಿನಾಚರಣೆಯ ಕುರಿತು ಭಾಷಣ ಮಾಡಿದರು.ನೆಹರೂರವರ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ವೇದಿಕೆಯಲ್ಲಿ ನಾರಾಯಣ .ಜಿ.ಹೆಗ್ಗಡೆ ,ಕೃಷ್ಣ ಕುಮಾರಿ ಟೀಚರ್,ಉಪಸ್ಥಿತರಿದ್ದರು.ಸಮಾಜ ಶಿಕ್ಷಕರಾದ ಶ್ರೀ ವಿರೇಶ್ವರ ಭಟ್ ರವರು ಸ್ವಾಗತಿಸಿದರೆ ಸಮಾಜ ಶಿಕ್ಷಕಿ ಶ್ರೀಮತಿ ಮೋಹಿನಿ ಅವರು ವಂದಿಸಿದರು.

View all
View all

ಕಲೋತ್ಸವ 2ನೇ ದಿನದ ಕಾರ್ಯಕ್ರಮ

ಕಲೋತ್ಸವದ 2ನೇ ದಿನದ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಆರಂಭಗೊಂಡಿತು.ವಿದ್ಯಾರ್ಥಿಗಳು ತುಂಬು ಉತ್ಸಾಹದಿಂದ ಪಾಲ್ಗೊಂಡರು.
View all
Get your own

ಮಾಪಿಳ್ಳ ಪಾಟ್ಟ್ ಹಾಡಿನ ಪೋಟೋ

Thursday 13 November 2014

ಶಾಲಾ ಮಟ್ಟದ ಸಂಕೃತೋತ್ಸವದ ಪಲಿತಾಂಶ 2014


ಸಂಸ್ಕೃತೋತ್ಸವ ಪಲಿತಾಂಶ 2014

ಕಲೋತ್ಸವ 2014 ಸಾಂಸ್ಕೃತಿಕ ಕಾರ್ಯಕ್ರಮ 13-11-2014


ಶಾಲಾ ಕಲೋತ್ಸವ 2014 ಕ್ಕೆ ಚಾಲನೆ



ಇಂದು ಸ್ಥಳೀಯ ಎಸ್..ಟಿ ಪ್ರೌಢಶಾಲೆಯ 2014 – 2015 ನೇ ಸಾಲಿನ ಶಾಲಾ ಕಲೋತ್ಸವವು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮನೋರಮಾ ಕಿಣಿಯವರ ಔಪಚಾರಿಕ ಉದ್ಘಾಟನೆಯೊಂದಿಗೆ ವಿದ್ಯುಕ್ತವಾಗಿ ಆರಂಭವಾಯಿತು. ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಲಿಲ್ಲಿ ಬಾಯಿ ಟೀಚರ್ ರವರು ಕಲೋತ್ಸವಕ್ಕೆ ಶುಭ ಕೋರಿದರು.ಪ್ರೌಢ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಕೃಷ್ಣ ಕುಮಾರಿ ಟೀಚರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಪಿ.ಟಿ.ಎ ಅಧ್ಯಕ್ಷರಾದ ಶ್ರೀ ನಿತಿನ್ ಚಂದ್ರ ಪೈ,ಎಲ್.ಪಿ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುದತಿ ಟೀಚರ್,ಸಿಬ್ಬಂದಿ ವರ್ಗದ ಕಾರ್ಯದರ್ಶಿ ನಾರಾಯಣ ಗೋಪಾಲಕೃಷ್ಣ ಹೆಗ್ಗಡೆ ಉಪಸ್ಥಿತರಿದ್ದರು.ಶಾಲಾ ಕಲೋತ್ಸವದ ಸಂಚಾಲಕರಾದ ಶ್ರೀ ವಿರೇಶ್ವರ ಭಟ್ ಸ್ವಾಗತಿಸಿದರೆ,ಕಾರ್ಯದರ್ಶಿ ನಾರಾಯಣ ಗೋಪಾಲಕೃಷ್ಣ ಹೆಗ್ಗಡೆ ವಂದಿಸಿದರು.ಇದೇ ಸಂದರ್ಭದಲ್ಲಿ ಶಾಲಾ ಕ್ರೀಡೋತ್ಸವದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.ವಿಜೇತರ ವಿವರವನ್ನು ದೈಹಿಕ ಶಿಕ್ಷಕರಾದ ಶ್ಯಾಮ ಕೃಷ್ಣ ಪ್ರಕಾಶ್ ನೀಡಿದರು. ಆನಂತರ ವಿವಿಧ ವೇದಿಕೆಗಳಲ್ಲಿ ಕಲೋತ್ಸವದ ಸ್ಪರ್ಧೆಗಳು ಆರಂಭಗೊಂಡಿತು.ಇನ್ನೂ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿರುವುದು.

Monday 10 November 2014

ಆಟೋಟದಲ್ಲಿ ನಮ್ಮ ಸಾಧನೆ

MANJESHWAR SUB DISTRICT SPORTS AND GAMES HIGH SCHOOL SECTION RUNNERS UP S.A.T HIGH SCHOOL,MANJESHWAR WITH 59 POINTS ಮಂಜೇಶ್ವರ ಉಪ - ಜಿಲ್ಲಾ ಮಟ್ಟದ ಕ್ರೀಡೋತ್ಸವ ದಿನಾಂಕ 5-11-2014 ರಿಂದ 7-11-2014 ರ ತನಕ ಮೀಯಾಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.

ಜೂನಿಯರ್ ಬಾಯ್ಸ್  ವೈಯಕ್ತಿಕ ಚಾಂಪಿಯನ್ಶಿಪ್
   
ಮೊಹಮ್ಮದ್ ರಿಲಾ 10ನೇ ತರಗತಿ
100 MTR - II PLACE,200 MTR - II PLACE,400  MTR - I PLACE
ವೈಯಕ್ತಿಕ ಚಾಂಪಿಯನ್ಶಿಪ್ ನ ಬಹುಮಾನ ಪಡೆಯುವ ಕ್ಷಣ
ಜೂನಿಯರ್ ಹುಡುಗಿಯರ ವಿಭಾಗ 
ಫಾತಿಮತ್ ಅಫ್ರೀಸಾ 10ಬಿ ತರಗತಿ 
100 MTR - II PLACE 
200 MTR - I PLACE
400 MTR - II PLACE

ಕ್ರೀಡಾ ವಿಜೇತ ವಿದ್ಯಾರ್ಥಿಗಳು ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಹಾಗೂ ದೈಹಿಕ ಶಿಕ್ಷಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶ್ ರೊಂದಿಗೆ


Sunday 9 November 2014

ನಮ್ಮೂರ ಷಷ್ಠಿ ಜಾತ್ರೆ


ನಮ್ಮೂರ ಷಷ್ಠಿ ಜಾತ್ರೆಗೆ  ತಮಗೆಲ್ಲರಿಗೂ ಹೃತ್ಪೂರ್ವಕ ಸುಸ್ವಾಗತ ಬಯಸುವ 

 
ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿವೃಂದ,
ಎಸ್..ಟಿ ಶಾಲೆಗಳು,ಮಂಜೇಶ್ವರ

Friday 7 November 2014

ಸಂಭ್ರಮದ ಕಾರ್ತಿಕ ದೀಪೋತ್ಸವ

ನಮ್ಮ ಶಾಲೆಯಲ್ಲಿ ಕಾರ್ತಿಕ ದೀಪೋತ್ಸವವು ಸಂಭ್ರಮ ಸಡಗರದೊಂದಿಗೆ ಆಚರಿಸಲ್ಪಟ್ಟಿತು. ಸಂಜೆ ಸುಮಾರು 6.15ರ ಸುಮಾರಿಗೆ ಚಿತ್ತೈಸಿದ ದೇವರು ಶಾಲೆಯಲ್ಲಿ ವಿರಾಜಮಾನರಾಗಿದ್ದ ವೇಳೆಯಲ್ಲಿ ಅಧ್ಯಾಪಕ ವೃಂದದವರಿಂದ ಭಜನಾ ಕಾರ್ಯಕ್ರಮವು ಜರುಗಿತು. ಇದೇ ಸಂದರ್ಭದಲ್ಲಿ ದೀಪಾಲಂಕಾರವನ್ನು ಮಾಡಲಾಗತ್ತು. ನಮ್ಮ ಶಾಲಾ ಶಿಕ್ಷಕಿಯಾಗಿರುವ ಶೈಲಜಾ  ಕಾಮತ್ ದೀಪೋತ್ಸವ ಸಮಯದಲ್ಲಿ ಅಗತ್ಯವಿರುವ 5 ಅಂಚಿನ ಕಂಚಿನ ದೀಪವನ್ನು ದಾನರೂಪದಲ್ಲಿ  ಶಾಲಾ ಪೂಜಾ ಕಮಿಟಿಗೆ ದೀಪ ಬೆಳಗಿಸುವುದರ ಮೂಲಕ ಹಸ್ತಾಂತರಿಸಿದರು.ಪೂಜೆಯ ಬಳಿಕ ನೆರೆದ ಭಕ್ತಾದಿಗಳಿಗೆ ಪ್ರಸಾದವನ್ನು ಹಂಚಲಾಯಿತು.

Wednesday 5 November 2014

ತುಳಸೀ ಪೂಜೆ

ನಮಸ್ತುಲಸಿ ಕಲ್ಯಾಣಿ, ನಮೋ ವಿಷ್ಣುಪ್ರಿಯೇ ಶುಭೇ||
ನಮೋ ಮೋಕ್ಷಪ್ರದೇ ದೇವಿ, ನಮಃ ಸಂಪತ್ ಪ್ರದಾಯಿನಿ॥
ಅಂದರೆ ಮಂಗಳಕಾರಕಳೂ, ವಿಷ್ಣುವಿಗೆ ಪ್ರಿಯಳಾದವಳೂ, ಶುಭಪ್ರದಳೂ, ಮೋಕ್ಷಪ್ರದಳೂ, ಸಂಪತ್ತನ್ನು ಅನುಗ್ರಹಿಸುವಳೂ ಆದ ತುಳಸೀ ಮಾತೆಗೆ ನನ್ನ ನಮಸ್ಕಾರಗಳು ಎಂದು ಅರ್ಥ. ಅಂತಹ ಶ್ರೇಷ್ಠಳಾದ ತುಳಸೀ ಮಾತೆಗೆ ಭಕ್ತಿ ಶ್ರದ್ಧೆಯಿಂದ ಪೂಜೆಯು 4-11-2014 ರಂದು ನಮ್ಮ ಶಾಲೆಯಲ್ಲಿ ಜರುಗಿತು.ಪೂಜೆಯ ಬಳಿಕ ಪ್ರಸಾದವನ್ನು ಎಲ್ಲರಿಗೂ ವಿತರಿಸಲಾಯಿತು.
ಸರ್ವಾಲಂಕೃತ ತುಳಸೀ ಕಟ್ಟೆ

 

Wednesday 29 October 2014

ಕರಾಟೆ ತರಬೇತಿ ಆರಂಭ

ಜಪಾನ್ ಶೋಟೋಕಾನ್ ಕರಾಟೆ ಎಸೋಶಿಯೇಶನ್ (G.S.K.A) ಕಾಸರಗೋಡು ವಿಭಾಗದ ಚೀಫ್ ಇನ್ಸ್ಟ್ರಕ್ಟರ್ ರಾದ ಶ್ರೀ ವಿ.ಬಿ ಸದಾನಂದನ್ ಇವರ ನೇತೃತ್ವದಲ್ಲಿ ಎಸ್.ಎ.ಟಿ ಪ್ರೌಢ ಶಾಲೆಯಲ್ಲಿ ಕರಾಟೆ ತರಗತಿ ಇಂದು ಆರಂಭಗೊಂಡಿತು.ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮನೋರಮಾ ಕಿಣಿ ಅಧ್ಯಕ್ಷತೆ ವಹಿಸಿ ಕರಾಟೆ ಕಲಿಯುವುದರ ಮಹತ್ವದ ಬಗ್ಗೆ ತಿಳಿಸಿ ಕರಾಟೆ ತರಬೇತಿಗೆ ಶುಭ ಹಾರೈಸಿದರು. ಕರಾಟೆ ಗುರುಗಳು ಮಾತನಾಡಿ ಇದರ ಮಹತ್ವ ಹಾಗೂ ಯಾವ ರೀತಿಯಲ್ಲಿ ತರಗತಿಗಳು ನಡೆಯುತ್ತವೆ ಎಂಬುದರ ಕುರಿತಾಗಿ ಮಕ್ಕಳಿಗೆ ತಿಳಿಸಿದರು. ಪ್ರಸ್ತುತ ಇವರು ಕಾಸರಗೋಡು ಜಿಲ್ಲೆಯಲ್ಲಿ 33 ಬೇರೆ ಬೇರೆ ಶಾಲೆಗಳಲ್ಲಿ ಕರಾಟೆ ತರಬೇತಿಯನ್ನು ನೀಡುತ್ತಿದ್ದಾರೆ. ಪ್ರಸ್ತುತ ನಮ್ಮ ಶಾಲೆಯಲ್ಲಿ  50 ಮಂದಿ ವಿದ್ಯಾರ್ಥಿಗಳು ಹೆಸರನ್ನು ನೊಂದಾಯಿಸಿ ಕರಾಟೆಯನ್ನು ಕಲಿಯುತ್ತಿದ್ದಾರೆ. ದೈಹಿಕ ಶಿಕ್ಷಕರಾದ ಶ್ರೀ ಶ್ಯಾಮ ಕೃಷ್ಣ ಪ್ರಕಾಶರು ಸ್ವಾಗತಿಸಿದರೆ ಹೈಸ್ಕೂಲ್ ವಿಭಾಗದ ಎಸ್.ಆರ್.ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್ ರವರು ವಂದಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ


ಸ್ಥಳೀಯ ಎಸ್. . ಟಿ ಪ್ರೌಢ ಶಾಲೆಯ ಸ್ಕೌಟ್ ಮತ್ತು ಗೈ಼ಡ್ ವಿದ್ಯಾರ್ಥಿಗಳಿಂದ ಮಂಜೇಶ್ವರದ ಸರಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಮುಮ್ತಾಝ್ ಶಮೀರಾ, ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷೆ ಮುಶ್ರತ್ ಜಹಾನ್, ಮಂಜೇಶ್ವರದ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು , ಗೈಡ್ ಸಂಚಾಲಕಿ ಸುಖನ್ಯಾ .ಕೆ.ಟಿ ಟೀಚರ್,ಶಿಕ್ಷಕ ಲಕ್ಷ್ಮಿದಾಸ್ ಪ್ರಭು ಹಾಗೂ ಎಸ್ ಆರ್.ಜಿ ಸಂಚಾಲಕರಾದ ಕಿರಣ್ ಕುಮಾರ್ ಉಪಸ್ಥಿತರಿದ್ದರು
 

Tuesday 28 October 2014

ನಮ್ಮ ಪ್ರತಿಭೆಗಳು

ಮಂಜೇಶ್ವರ ಉಪ-ಜಿಲ್ಲಾ ವಿದ್ಯಾರಂಗ  ಸಾಹಿತ್ಯೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು
  ಕುಮಾರಿ ನೇತ್ರಾವತಿ 10ನೇ ತರಗತಿ ಪ್ರೌಢಶಾಲಾ ವಿಭಾಗದ ಕಥಾ ರಚನೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ.ಇವಳು ಶ್ರೀ ಅಶೋಕ ಹಾಗೂ ಶ್ರೀಮತಿ ಭಾರತಿ ದಂಪತಿಗಳ ಸುಪುತ್ರಿ.

ಕುಮಾರಿ ಪಲ್ಲವಿ ಪ್ರಭು 8 ನೇ ತರಗತಿ ಪ್ರೌಢಶಾಲಾ ವಿಭಾಗದ ಕಾವ್ಯ ಮಂಜರಿಯಲ್ಲಿ  ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ.ಇವಳು ಶ್ರೀ ಪಾಂಡುರಂಗ ಪ್ರಭು ಹಾಗೂ ಶ್ರೀಮತಿ ಅನುಸೂಯ ಪ್ರಭು ದಂಪತಿಗಳ ಸುಪುತ್ರಿ.

 ಮಾಸ್ಟರ್ ಜಿತೇಶ್ 7ನೇ ತರಗತಿ ಹಿರಿಯ ಪ್ರಾಥಮಿಕ ವಿಭಾಗದ ಚಿತ್ರ ರಚನೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾನೆ. ಇವನು ಶ್ರೀ ಪುರುಷೋತ್ತಮ ಹಾಗೂ ಶ್ರೀಮತಿ ಚಂದ್ರಾವತಿ ದಂಪತಿಗಳ ಸುಪುತ್ರ.
 
16-10-2014 ರಂದು ಮತ್ತು 17-10-2014 ರಂದು ಸಂತ ಜೋಸೆಫ್ ಕಳಿಯೂರಿನಲ್ಲಿ ನಡೆದ  ವೃತ್ತಿ ಕರಕುಶಲ ಮೇಳಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಯಾದ ಮಾಸ್ಟರ್ ಮೊಹಮ್ಮದ್ ಅಫ್ರಾನ್ ಎಸ್ 6 ನೇ ತರಗತಿ ಕೊಡೆ ತಯಾರಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಈತ ದಿ. ಶ್ರೀ ಸೈಯದ್ ಅಸ್ರಾಫ್ ಹಾಗೂ ಶ್ರೀಮತಿ ಕದೀಜ ದಂಪತಿಗಳ ಪುತ್ರ ಎಸ್ . . ಟಿ ಪ್ರೌಢಶಾಲೆಯ ವಿದ್ಯಾರ್ಥಿ

Monday 27 October 2014

ಕೃಷಿ ಮಾರ್ಗದರ್ಶನ ಮತ್ತು ತರಕಾರಿ ಬೀಜ ವಿತರಣೆ


ದಿನಾಂಕ 27/10/2014 ನೇ ಸೋಮವಾರದಂದು ಮಂಜೇಶ್ವರದ ಎಸ್..ಟಿ ಪ್ರೌಢಶಾಲೆಯಲ್ಲಿ ಪರಿಸರ ಸಂಘ ಮತ್ತು ಕೃಷಿ ಭವನ,ಮಂಜೇಶ್ವರ ಇದರ ಸಹಯೋಗದೊಂದಿಗೆ ಕೃಷಿ ಮಾರ್ಗದರ್ಶನ ಮತ್ತು ತರಕಾರಿ ಬೀಜ ವಿತರಣೆ ಕಾರ್ಯಕ್ರಮ ಜರುಗಿತು.. ಇದರಲ್ಲಿ ಕೃಷಿ ಅಧಿಕಾರಿಗಳಾದ ಶ್ರೀ ಅಂಬುಜಾಕ್ಷನ್ ವಿದ್ಯಾರ್ಥಿಗಳಿಗೆ ನಮ್ಮ ಪರಿಸರದಲ್ಲಿ ಜೈವಿಕ ವಿಧಾನದಲ್ಲಿ ಮಾಡಬಹುದಾದಂತಹ ಸ್ವಾವಲಂಬಿ ತರಕಾರಿ ಕೃಷಿಯ ಬಗ್ಗೆ ಮಾರ್ಗದರ್ಶನವನ್ನು ನೀಡಿದರು.ನಮ್ಮ ಪರಿಸರದಲ್ಲಿ ನಾವೇ ಬೆಳೆಸುವಂತಹ ಉತ್ತಮವಾದ ತರಕಾರಿಯನ್ನು ಸೇವಿಸುವುದರಿಂದ ಆರೋಗ್ಯವಂತರಾಗಲು ಸಾಧ್ಯ ಎಂದು ತಿಳಿಸಿದರು.ಪ್ರಭಾರ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಕೃಷ್ಣ ಕುಮಾರಿಯವರು ತರಕಾರಿ ಕೃಷಿಯನ್ನು ವಿದ್ಯಾಭ್ಯಾಸದ ಜೊತೆಯಲ್ಲಿ ಮಾಡುವುದರಿಂದ ಆತ್ಮ ತೃಪ್ತಿಯೂ ,ಅದರ ಬಗ್ಗೆ ಎಳವೆಯಲ್ಲಿಯೇ ಅರಿವು ಮೂಡುತ್ತದೆ ಎಂದು ತಿಳಿಸಿದರು.
ಕೃಷಿ ಸಹಾಯಕ ಅಧಿಕಾರಿಗಳಾದ ಶಿವ ಪ್ರಸಾದರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ತರಕಾರಿ ಬೀಜದ ಕಿಟ್ ವಿತರಿಸಲಾಯಿತು..ಶಾಲೆಯ ಇಕೋ ಕ್ಲಬ್ ನ ಸಹ ಸಂಚಾಲಕರಾದ ಶ್ಯಾಮ ಕೃಷ್ಣ ಪ್ರಕಾಶ್ ,ಶಿಕ್ಷಕ ನಾಗೇಶ್,ಪೂರ್ಣಯ್ಯ ಪುರಾಣಿಕ್ ಉಪಸ್ಥಿತರಿದ್ದರು.

Friday 24 October 2014

MOTIVATIONAL CLASS FOR PARENTS


STEP : 2014 ನೇ ದ್ವೀತಿಯ ಹಂತದ ಭಾಗವಾಗಿ ರಕ್ಷಕರ awareness ತರಬೇತಿಯು ದಿನಾಂಕ 24.10.2014 ರಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಅನಂತ ವಿದ್ಯಾ ಸಭಾಂಗಣದಲ್ಲಿ ನಡೆಸಲಾಯಿತು.ನಮ್ಮ ಶಾಲೆಯ ಅಧ್ಯಾಪಾಕರಾದ ಶ್ರಿ ಪುರ್ಣಯ್ಯ ಪುರೀಣಿಕ್ ಹಾಗೂ ಶ್ರೀಮತಿ ವಸುಧಾಲಕ್ಷ್ಮಿ ಯವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಮನೋಮರಮ ಕಿಣಿ ಯವರು ವಹಿಸಿದರು. ಈ ಸಂದರ್ಭದಲ್ಲಿ ಎಸ್ . ಆರ್. ಜಿ ಸಂಚಾಲಕರಾದ ಶ್ರೀ ಕಿರಣ್ ಕುಮಾರ್, ಸಿಬ್ಬಂದಿ ವರ್ಗ ಕಾರ್ಯದರ್ಶಿಯಾದ ಶ್ರೀ ನಾರಯಣ ಗೋಪಾಲ ಕೃಷ್ಣಹೆಗಡೆ ಉಪಸ್ಥಿತರಿದ್ದರು. ಶಿಕ್ಷಕಿ ಸುರೇಖ ಮಲ್ಯ ಸ್ವಾಗತಿಸಿ ,ಶ್ರೀಮತಿ ವಸುಧಾಲಕ್ಷ್ಮಿ ಧನ್ಯವಾದವನ್ನು ನೀಡಿದರು.

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.