Sunday 25 November 2018

ಕಾಸರಗೋಡು ಜಿಲ್ಲಾ ಕರಕುಶಲ ಮೇಳದ ಕೊಡೆ ನಿರ್ಮಾಣ ವಿಭಾಗದಲ್ಲಿ ಪ್ರಥಮ Aಗ್ರೇಡ್ ನೊಂದಿಗೆ  ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ  Aಗ್ರೇಡ್  ಪಡೆದು ಎಸ್.ಎ.ಟಿ ಪ್ರೌಢಶಾಲೆಯ ಹತ್ತನೆಯ ತರಗತಿಯ ಮೊಹಮ್ಮದ್ ಅಫ್ರಾನ್ ಶಾಲೆಗೆ ಕೀರ್ತಿ ತಂದಿದ್ದಾನೆ.

Thursday 11 October 2018

October 2 .2018 ಎಸ್. ಎ.ಟಿ.ಶಾಲೆಯಲ್ಲಿ       ಮಹಾತ್ಮಗಾಂಧಿಜಯಂತಿ ಆಚರಣೆ .

Saturday 29 September 2018

ಇತ್ತೀಚೆಗೆ 2018ನೇ ಸಾಲಿನ



ಎಸ್ .ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ಹಾಗೂ ಕ್ರೀಡೋತ್ಸವದಲ್ಲಿ ಜರುಗಿತು.

Thursday 20 September 2018




ಎಸ್. ಎ.ಟಿ.ಪ್ರೌಢ ಶಾಲೆ ಯ ವಿದ್ಯಾರ್ಥಿಗಳ ಕರಕುಶಲ ಮೇಳ ನಡೆಯಿತು .ಮುಖ್ಯೋಪಾಧ್ಯಾಯರಾದ ಮುರಳಿಕೃಷ್ಣ ಎನ್ ಶುಭಕೋರಿದರು  ಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ನೇತೃತ್ವವಹಿಸಿ ಎಲ್ಲಾ ಅಧ್ಯಾಪಕರು ಸಹಕರಿಸಿದರು 

Thursday 6 September 2018


ಮಂಜೇಶ್ವರ ಸೆಪ್ಟೆಂಬರ 5: ಎಸ್ .ಎ.ಟಿ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆಯನ್ನು ನಿವೃತ್ತ ಮುಖೋಪಧ್ಯಾಯರಾದ ಶ್ರೀ ಗಣಪತಿ ಭಟ್ ಅವರನ್ನು ಸನ್ಮಾನಿಸಿ ಆಚರಣೆ ಮಾಡಲಾಯಿತು 

Wednesday 29 August 2018

ನಮ್ಮ ಶಾಲೆಯ ವಿದ್ಯಾರ್ಥಿನಿಯಾದ ದಿವಂಗತ .ಕು.ಪ್ರತಿಭಾ ಅವಳ ಹೆತ್ತವರಿಗೆ ಶಾಲಾ ವತಿಯಿಂದ ಸಂಗ್ರಹಿಸಿದ ಹಣವನ್ನು
ಶಾಲಾ ಪ್ರಬಂಧಕರು ಮತ್ತು ಪಿ.ಟಿ.ಎ ಅಧ್ಯಕ್ಷರು  ನೀಡಿ
ಸಾಂತ್ವನ ಹೇಳಿದರು 

Wednesday 15 August 2018


  ಎಸ್.ಎ.ಟಿ.ಶಾಲೆ,ಮಂಜೇಶ್ವರ 72ನೇ ಸ್ವಾತಂತ್ರ್ಯ ದಿನಾಚರಣೆ 

Wednesday 1 August 2018

ಜುಲೈ 31. ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಶಾಲಾ ಹಿಂದಿ ಕ್ಲಬ್ ನ ನೇತೃತ್ವದಲ್ಲಿ    ಖ್ಯಾತ ಉಪನ್ಯಾಸಕ 
ದಿ.ಪ್ರೇಮ್ ಚಂದ್ ಜನ್ಮ     ದಿನಾಚರಣೆಯನ್ನು  ಆಚರಿಸಲಾಯಿತು.   ಹಿಂದಿ    ಶಿಕ್ಷಕಿ     ಶ್ರೀಮತಿ ಸುಖನ್ಯಾ.ಕೆ.ಟಿ.ಅವರು  ದಿ.ಪ್ರೇಮ್ ಚಂದ್ ಬದುಕಿನ ಚಿತ್ರಣವನ್ನು ಮಕ್ಕಳಿಗೆ ವಿವರಿಸಿದರು.  ಕಲಾ ಶಿಕ್ಷಕರಾದ ಜಯಪ್ರಕಾಶ್ ಶೆಟ್ಟಿ ಬೇಳ ಅವರು ಮಕ್ಕಳಿಗೆ ಲೇಖಕರ ಬಗ್ಗೆ ವಿಡಿಯೋ ಪ್ರದರ್ಶನ ವನ್ನು ಏರ್ಪಡಿಸಿದರು. ಶಿಕ್ಷಕಿ ಜಯಶ್ರೀ ಉಪಸ್ಥಿತರಿದ್ದರು.ಹಿರಿಯ ಹಿಂದಿ ಅಧ್ಶಾಪಕಿ    
ಶ್ರೀಮತಿ  ಪೂರ್ಣಿಮಾ ಟೀಚರ್  ಕಾರ್ಯ ಕ್ರಮ ನಿರೂಪಿಸಿದರು.

Friday 27 July 2018

2018-19 ನೇ ಸಾಲಿನ ಶಾಲಾ ಪಾರ್ಲಿಮೆಂಟ್ ಚುನಾವಣೆ

 ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ವತಿಯಿಂದ ಬಾಲ ಗಂಗಾಧರ ತಿಲಕ್ ರವರ ಜನ್ಮದಿನ ಆಚರಣೆ ಮಾಡಲಾಯಿತು.ಆ ಪ್ರಯುಕ್ತ ಮಕ್ಕಳಿಗೆ ಬಾಲ ಗಂಗಾಧರ ತಿಲಕರ ದೇಶಪ್ರೇಮದ ಕುರಿತು ಪ್ರಬಂಧ ಬರೆದು ಮಂಡನೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಅಧ್ಯಾಪಕರಾದ ಮೋಹಿನಿ ಟೀಚರ್, ಗಣೇಶ್ ಪ್ರಸಾದ್ ನಾಯಕ್, ಶಾಂತಾರಾಮ್ ಮುಂತಾದವರು ಉಪಸ್ಥಿತರಿದ್ದರು.

Monday 16 July 2018

ಯು ಪಿ ವಿಭಾಗದ ಸುಸಜ್ಜಿತವಾದ ನೂತನ ಕಂಪ್ಯೂಟರ ಲ್ಯಾಬ್ ನ ಉದ್ಘಾಟನೆ

ಎಸ್ ಎ ಟಿ ಶಾಲೆ ಮಂಜೇಶ್ವರ, ಇದರ ಯು ಪಿ ವಿಭಾಗದ ಸುಸಜ್ಜಿತವಾದ ನೂತನ  ಕಂಪ್ಯೂಟರ ಲ್ಯಾಬ್ ನ  ಉದ್ಘಾಟನೆಯು ತಾರೀಕು 16-7-18 ಪೂರ್ವಾಹ್ನ 10 ಘಂಟೆಗೆ ವಿದ್ಯುಕ್ತವಾಗಿ ಜರುಗಿತು.ಶ್ರೀಮದ್ ಅನಂತೇಶ್ವರ ದೇವಳದ ಆಢಳಿತ ಮಂಡಳಿ ಉಪಾಧ್ಯಕ್ಷ ಛತ್ರಪತಿ ಪ್ರಭು ಅವರು ರಿಬ್ಬನ್ ಕತ್ತರಿಸುವುದರೊ0ದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಪ್ರಬಂಧಕ ಕೃಷ್ಣ ಭಟ್ ದೀಪ ಪ್ರಜ್ವಾಲನೆ ನಡೆಸಿ ಮಾತನಾಡಿ ಲ್ಯಾಬ್ ನ ಪೂರ್ಣ ಸದುಪಯೋಗವಾಗಬೇಕು ಎಂಬ ಸಂದೇಶ ನೀಡಿದರು. ಶಾಲಾ ಪಿಟಿ ಎ ಅಧ್ಯಕ್ಷ ಅಬ್ದುಲ್ ಬಶೀರ್, ಶಾಲಾ ಪ್ರಾಂಶುಪಾಲ ಮುರಳಿಕೃಷ್ಣ, ಶುಭಾಶ0ಸನೆಗೈದರು, ಶಾಲಾ ಎಸ್ ಆರ್ ಜಿ ಕನ್ವೀನರ್ ಸುಮನ ಐಲ್ ಕಾರ್ಯಕ್ರಮ ನಿರ್ವಹಿಸಿ, ಗಣೇಶ್ ಪ್ರಸಾದ್ ಸ್ವಾಗತಿಸಿದರು. ಶಾಲಾ ಸಿಬ್ಬಂದಿ ವಿಭಾಗ ಕಾರ್ಯದರ್ಶಿ ಸುಕನ್ಯ ರವರು ವಂದಿಸಿದರು.
ಅಧ್ಯಾಪಕರಾದ ಪೂರ್ಣಯ್ಯಪುರಾಣಿಕ, ಲಕ್ಷ್ಮಿದಾಸ್ ಪ್ರಭು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ವಿಧ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಯಿತು.

Monday 9 July 2018


S.A.T ಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಜರಗಿತು . ಕ್ರಷಿಕರಾದ ಸದಾಶಿವ ರವರು ನೇಜಿ ನೆಡುವ ಕ್ರಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು . ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ .ಟಿ ಹಾಗು ಸ್ಕೌಟ್ ಅಧ್ಯಾಪಕರಾದ ಲಕ್ಷ್ಮಿದಾಸ್ ಪ್ರಭು ಸಹಕರಿಸಿದರು .
ಎಸ್.ಎ.ಟಿ.ಪ್ರೌಢಶಾಲೆಯಲ್ಲಿ Little kite ಉದ್ಘಾಟನೆ

Saturday 7 July 2018

 hello English ಉದ್ಘಾಟನಾ ಸಮಾರಂಭ  ಎಲ್ಲಾ ಅಧ್ಯಾಪಕ ಬಂಧು ಭಗಿನಿಯರಿಗೂ ಸ್ವಾಗತ...🙏🙏🙏
ಮಂಜೇಶ್ವರ ಲಿಲ್ಲಿ ಭಾಯಿ ಟೀಚರ್ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಮಂಜೇಶ್ವರ ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಸುದೀರ್ಘ ಸೇವೆ ಮಾಡಿ ನಿವೃತ್ತರಾಗಿ ಪ್ರೀ ಪ್ರೈಮರಿ ಶಾಲೆಯನ್ನು ಪುನರುಜ್ಜೀವನ ಮಾಡಿ ಶಾಲೆ ಯ ಅಭಿವೃದ್ಧಿ ಗೆ ಅವಿರತಶ್ರಮ ವಹಿಸಿದ್ದರು. ಗೈಡ್ ದಳದಲ್ಲಿ ಹೆಸರನ್ನು ಗಳಿಸಿದ ಒಂದು ಮಾದರಿ ಶಿಕ್ಷಕಿಯಾಗಿ ತನ್ನನ್ನು ಶಾಲಾ ಮಕ್ಕಳ ಅಭಿವೃದ್ಧಿಗೋಸ್ಕರ ಜೀವನ ವನ್ನು ಮುಡಿಪಾಗಿಟ್ಟವರು. ಅವರು ತಮ್ಮ ಬಂಧು ಬಳಗ ವನ್ನು ಅಗಲಿದ್ದಾರೆ.ಅವರಿಗೆ ಎಸ್.ಎ.ಟಿ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ,ಆಡಳಿತ ಮಂಡಳಿ ಮತ್ತು ಶಾಲಾ ಸಿಬ್ಬಂದಿ ವರ್ಗ ಶ್ರದ್ಧಾಂಜಲಿ ಕೊಡಲಾಗಿದೆ.
ವಿವಿಧ ಕ್ಲಬ್ ಗಳ ಉದ್ಘಾಟನೆ







ತಾರೀಕು 26-6-2018 ರಂದು SAT ಶಾಲೆಯ ಲ್ಲಿ ಮಾದಕವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಶಾಲಾ ಅಸ್ಸಂಬ್ಲಿ  ಯಲ್ಲಿ ಮಾದಕವಸ್ತುಗಳ ವಿರುದ್ಧ ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಎಸ್ ಆರ್ ಜಿ  ಸ0ಚಾಲಕ ಗಣೇಶ್ ಪ್ರಸಾದ್  ಬೋಧಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಮುರಳೀಕೃಷ್ಣ ಮಾದಕವಸ್ತುಗಳ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.ಮಳೆಗಾಲದ ದಿನಗಳಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಎಚ್ಚರಿಕೆಗಳ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೂಡ ಅವರು ಬೋಧಿಸಿದರು.ಶಾಲಾ ದೈಹಿಕ ಶಿಕ್ಷಕ ಶ್ಯಾಮ್ ಕೃಷ್ಣ ಪ್ರಕಾಶ್ ಕಾರ್ಯ ಕ್ರಮ ನಿರೂಪಿಸಿದರು.
Attachments area

Friday 29 June 2018

ಮಂಜೇಶ್ವರದ ಎಸ್ ಎ ಟಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ 2018

ಮಂಜೇಶ್ವರದ ಎಸ್ ಎ ಟಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ತಾರೀಕು 21-6-18 ಗುರುವಾರ ಶಾಲೆಯ ಅನಂತ ಜ್ಞಾನ ಸಭಾಂಗಣದಲ್ಲಿ ಜರುಗಿತು. 
ಜಮುನಾ ಸೇವಾ ಸಂಘದ ಕಾಸರಗೋಡು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಸದಾಶಿವ ಕಡಂಬಾರು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಯೋಗದಿನವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.  ಮುಖ್ಯೋಪಾಧ್ಯಾಯರಾದ ಮುರಳಿ ಕೃಷ್ಣರವರು ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತೇಜಸ್ ಕಿರಣ್, ಸಿಬ್ಬಂದಿ ಕಾರ್ಯದರ್ಶಿ ಶ್ರೀಮತಿ ಸುಕನ್ಯಾ ಶಾಲೆಯ  ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ದೈಹಿಕ ಶಿಕ್ಷಕ ಶ್ಯಾಮ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಅಧ್ಯಾಪಕರಾದ ಲಕ್ಮೀದಾಸ್ ವಂದಿಸಿದರು. ಅಧ್ಯಾಪಕರಾದ ಈಶ್ವರ ಕಿದೂರು, ಪೂರ್ಣಿಮಾ ನಾಯಕ್, ಮಹೇಶ ಕೆ ವಿ, ಶಾಂತಾರಾಮ, ಗಣೇಶ್ ನಾಯಕ್, ಮಲ್ಲಿಕಾ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳಿಗೆ ಯೋಗ ದಿನದ ಮಹತ್ವವನ್ನು ಸಂಪನ್ಮೂಲ ವ್ಯಕ್ತಿ ಸದಾಶಿವ ಕಡಂಬಾರು ವಿವರಿಸಿ, ಯೋಗಗಳ ಪ್ರಾತ್ಯಕ್ಷಿಕೆ ನೀಡಿದರು.
Attachments area

ಎಸ್.ಎ.ಟಿ.ಪ್ರೌಢ ಶಾಲೆ ಮಂಜೇಶ್ವರವಿಶ್ವ ಪರಿಸರ ದಿನಾಚರಣೆ 2018ಜೂನ್ 5


ಎಸ್.ಎ.ಟಿ.ಪ್ರೌಢ ಶಾಲೆಯ ಪ್ರವೇಶೋತ್ಸವ 2018


ಎಸ್.ಎ.ಟಿ.ಪ್ರೌಢ ಶಾಲೆಯ 2018ಜೂನ್ 1 ಶಾಲಾ ಪ್ರವೇಶೋತ್ಸವ ಅನಂತ ಜ್ಞಾನ ಸಭಾಂಗಣದಲ್ಲಿ ವಿಧ್ಯುಕ್ತವಾಗಿ ನೆರವೇರಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರು ಅಬ್ದುಲ್ ಬಷೀರ್ ಶುಭ ಹಾರೈಸಿದರು.ಮುಖ್ಯೋಪಾಧ್ಯಾಯರಾದ ಮುರಳೀಕೃಷ್ಣ ಮಕ್ಕಳಿಗೆ ಹಿತವಚನಗೈದರು.ಶಾಲಾ ಎಸ್. ಆರ್.ಜಿ.ಗಣೇಶ್ ನಾಯಕ್ ಸ್ವಾಗತಿಸಿ, ಶ್ರೀಮತಿ ಸುಕನ್ಯ ಟೀಚರ್ ವಂದಿಸಿದರು.ಜಿ.ವೀರೇಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮ ಕೃಷ್ಣ ಪ್ರಕಾಶ್,ಸುಮತಿ ಟೀಚರ್,ಮಹೇಶ್ ಕೆ.ವಿ.,
 ಶ್ರೀದಾಸಪ್ಪ ರೈ,ಅಜಿತ್ ಕುಮಾರ್ ಶೆಟ್ಟಿ. ಕಲಾ  ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ಉಪಸ್ಥಿತರಿದ್ದರು. ಐದನೆಯ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಿಸಲಾಯಿತು.

Attachments area

Wednesday 17 January 2018

pec level sastrotsava 2017-18 @gvhss kunjathoor
ಪಾಲಿಯೇಟಿವ್ ಕೇರ್ ದಿನ ಹಾಗೂ ಸ್ನೇಹ ಸಂಗಮ ದ ಅಂಗವಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿ ಕಾರ್ಯಕ್ರಮದಲ್ಲಿ ಭಾವಗೀತೆಗಳನ್ನು ಹಾಡಿ ಮನರಂಜಿಸಿದ ಎಸ್.ಎ.ಟಿ.ಪ್ರೌಢ ಶಾಲೆಯ ವಿದ್ಯಾರ್ಥಿನಿಯರು

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.