Friday 27 July 2018

2018-19 ನೇ ಸಾಲಿನ ಶಾಲಾ ಪಾರ್ಲಿಮೆಂಟ್ ಚುನಾವಣೆ

 ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ವತಿಯಿಂದ ಬಾಲ ಗಂಗಾಧರ ತಿಲಕ್ ರವರ ಜನ್ಮದಿನ ಆಚರಣೆ ಮಾಡಲಾಯಿತು.ಆ ಪ್ರಯುಕ್ತ ಮಕ್ಕಳಿಗೆ ಬಾಲ ಗಂಗಾಧರ ತಿಲಕರ ದೇಶಪ್ರೇಮದ ಕುರಿತು ಪ್ರಬಂಧ ಬರೆದು ಮಂಡನೆ ಮಾಡುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಅಧ್ಯಾಪಕರಾದ ಮೋಹಿನಿ ಟೀಚರ್, ಗಣೇಶ್ ಪ್ರಸಾದ್ ನಾಯಕ್, ಶಾಂತಾರಾಮ್ ಮುಂತಾದವರು ಉಪಸ್ಥಿತರಿದ್ದರು.

Monday 16 July 2018

ಯು ಪಿ ವಿಭಾಗದ ಸುಸಜ್ಜಿತವಾದ ನೂತನ ಕಂಪ್ಯೂಟರ ಲ್ಯಾಬ್ ನ ಉದ್ಘಾಟನೆ

ಎಸ್ ಎ ಟಿ ಶಾಲೆ ಮಂಜೇಶ್ವರ, ಇದರ ಯು ಪಿ ವಿಭಾಗದ ಸುಸಜ್ಜಿತವಾದ ನೂತನ  ಕಂಪ್ಯೂಟರ ಲ್ಯಾಬ್ ನ  ಉದ್ಘಾಟನೆಯು ತಾರೀಕು 16-7-18 ಪೂರ್ವಾಹ್ನ 10 ಘಂಟೆಗೆ ವಿದ್ಯುಕ್ತವಾಗಿ ಜರುಗಿತು.ಶ್ರೀಮದ್ ಅನಂತೇಶ್ವರ ದೇವಳದ ಆಢಳಿತ ಮಂಡಳಿ ಉಪಾಧ್ಯಕ್ಷ ಛತ್ರಪತಿ ಪ್ರಭು ಅವರು ರಿಬ್ಬನ್ ಕತ್ತರಿಸುವುದರೊ0ದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಪ್ರಬಂಧಕ ಕೃಷ್ಣ ಭಟ್ ದೀಪ ಪ್ರಜ್ವಾಲನೆ ನಡೆಸಿ ಮಾತನಾಡಿ ಲ್ಯಾಬ್ ನ ಪೂರ್ಣ ಸದುಪಯೋಗವಾಗಬೇಕು ಎಂಬ ಸಂದೇಶ ನೀಡಿದರು. ಶಾಲಾ ಪಿಟಿ ಎ ಅಧ್ಯಕ್ಷ ಅಬ್ದುಲ್ ಬಶೀರ್, ಶಾಲಾ ಪ್ರಾಂಶುಪಾಲ ಮುರಳಿಕೃಷ್ಣ, ಶುಭಾಶ0ಸನೆಗೈದರು, ಶಾಲಾ ಎಸ್ ಆರ್ ಜಿ ಕನ್ವೀನರ್ ಸುಮನ ಐಲ್ ಕಾರ್ಯಕ್ರಮ ನಿರ್ವಹಿಸಿ, ಗಣೇಶ್ ಪ್ರಸಾದ್ ಸ್ವಾಗತಿಸಿದರು. ಶಾಲಾ ಸಿಬ್ಬಂದಿ ವಿಭಾಗ ಕಾರ್ಯದರ್ಶಿ ಸುಕನ್ಯ ರವರು ವಂದಿಸಿದರು.
ಅಧ್ಯಾಪಕರಾದ ಪೂರ್ಣಯ್ಯಪುರಾಣಿಕ, ಲಕ್ಷ್ಮಿದಾಸ್ ಪ್ರಭು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ವಿಧ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆಯಿತು.

Monday 9 July 2018


S.A.T ಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ಶ್ರೀಮತ್ ಅನಂತೇಶ್ವರ ದೇವಸ್ಥಾನದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಜರಗಿತು . ಕ್ರಷಿಕರಾದ ಸದಾಶಿವ ರವರು ನೇಜಿ ನೆಡುವ ಕ್ರಮವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು . ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ .ಟಿ ಹಾಗು ಸ್ಕೌಟ್ ಅಧ್ಯಾಪಕರಾದ ಲಕ್ಷ್ಮಿದಾಸ್ ಪ್ರಭು ಸಹಕರಿಸಿದರು .
ಎಸ್.ಎ.ಟಿ.ಪ್ರೌಢಶಾಲೆಯಲ್ಲಿ Little kite ಉದ್ಘಾಟನೆ

Saturday 7 July 2018

 hello English ಉದ್ಘಾಟನಾ ಸಮಾರಂಭ  ಎಲ್ಲಾ ಅಧ್ಯಾಪಕ ಬಂಧು ಭಗಿನಿಯರಿಗೂ ಸ್ವಾಗತ...🙏🙏🙏
ಮಂಜೇಶ್ವರ ಲಿಲ್ಲಿ ಭಾಯಿ ಟೀಚರ್ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು ಮಂಜೇಶ್ವರ ಎಸ್.ಎ.ಟಿ.ಪ್ರೌಢಶಾಲೆಯಲ್ಲಿ ಸುದೀರ್ಘ ಸೇವೆ ಮಾಡಿ ನಿವೃತ್ತರಾಗಿ ಪ್ರೀ ಪ್ರೈಮರಿ ಶಾಲೆಯನ್ನು ಪುನರುಜ್ಜೀವನ ಮಾಡಿ ಶಾಲೆ ಯ ಅಭಿವೃದ್ಧಿ ಗೆ ಅವಿರತಶ್ರಮ ವಹಿಸಿದ್ದರು. ಗೈಡ್ ದಳದಲ್ಲಿ ಹೆಸರನ್ನು ಗಳಿಸಿದ ಒಂದು ಮಾದರಿ ಶಿಕ್ಷಕಿಯಾಗಿ ತನ್ನನ್ನು ಶಾಲಾ ಮಕ್ಕಳ ಅಭಿವೃದ್ಧಿಗೋಸ್ಕರ ಜೀವನ ವನ್ನು ಮುಡಿಪಾಗಿಟ್ಟವರು. ಅವರು ತಮ್ಮ ಬಂಧು ಬಳಗ ವನ್ನು ಅಗಲಿದ್ದಾರೆ.ಅವರಿಗೆ ಎಸ್.ಎ.ಟಿ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ,ಆಡಳಿತ ಮಂಡಳಿ ಮತ್ತು ಶಾಲಾ ಸಿಬ್ಬಂದಿ ವರ್ಗ ಶ್ರದ್ಧಾಂಜಲಿ ಕೊಡಲಾಗಿದೆ.
ವಿವಿಧ ಕ್ಲಬ್ ಗಳ ಉದ್ಘಾಟನೆ







ತಾರೀಕು 26-6-2018 ರಂದು SAT ಶಾಲೆಯ ಲ್ಲಿ ಮಾದಕವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು. ಶಾಲಾ ಅಸ್ಸಂಬ್ಲಿ  ಯಲ್ಲಿ ಮಾದಕವಸ್ತುಗಳ ವಿರುದ್ಧ ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಎಸ್ ಆರ್ ಜಿ  ಸ0ಚಾಲಕ ಗಣೇಶ್ ಪ್ರಸಾದ್  ಬೋಧಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಮುರಳೀಕೃಷ್ಣ ಮಾದಕವಸ್ತುಗಳ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.ಮಳೆಗಾಲದ ದಿನಗಳಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಎಚ್ಚರಿಕೆಗಳ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೂಡ ಅವರು ಬೋಧಿಸಿದರು.ಶಾಲಾ ದೈಹಿಕ ಶಿಕ್ಷಕ ಶ್ಯಾಮ್ ಕೃಷ್ಣ ಪ್ರಕಾಶ್ ಕಾರ್ಯ ಕ್ರಮ ನಿರೂಪಿಸಿದರು.
Attachments area

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.