Wednesday 1 March 2017


       
ಎಸ್. . ಟಿ ಶಾಲೆಯಲ್ಲಿ ವಿಜ್ಞಾನೋತ್ಸವ - 2017

ಮಂಜೇಶ್ವರ : ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯ ಆಸಕ್ತಿಯನ್ನು ಸದಾಜಾಗೃತಗೊಳಿಸುವ ಸದುದ್ದೇಶದೊಂದಿಗೆ ರೂಪಿಸಲಾಗಿರುವ ಶೈಕ್ಷಣಿಕ ಸಮಗ್ರಯೋಜನೆ ವಿಜ್ಞಾನೋತ್ಸವ - 2017 ವನ್ನು ಇಲ್ಲಿನ ಎಸ್. . ಟಿ ಶಾಲೆಯಲ್ಲಿ ಇತ್ತೀಚೆಗೆ ಜರಗಿಸಲಾಯಿತು.
ಸರ್ವಶಿಕ್ಷಾ ಅಭಿಯಾನ ಕಾಸರಗೋಡು ಮತ್ತು ಬಿ. ಆರ್ . ಸಿ ಮಂಜೇಶ್ವರ ಇವುಗಳ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶಾಲಾಮಟ್ಟದ ವಿಜ್ಞಾನೋತ್ಸವ ವನ್ನು ಪ್ರಾಂಶುಪಾಲೆ ಮನೋರಮ ಕಿಣಿ ರಾಕೆಟ್ ಪಟಾಕಿ ಹಾರಿಸುವುದರೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಕೃಷ್ಣಕುಮಾರಿ , ಸಿಬ್ಬಂದಿ ಒಕ್ಕೊಟದ ಕಾರ್ಯದರ್ಶಿ ಜಿ. ವಿರೇಶ್ವರ ಭಟ್ , ಯು.ಪಿ ವಿಭಾಗದ ಎಸ್.ಆರ್ ಜಿ ಸಂಚಾಲಕರಾದ ದಾಸಪ್ಪ ರೈ, ವಿಜ್ಞಾನ ಶಿಕ್ಷಕರಾದ ಈಶ್ವರ ಕಿದೂರ್ , ಲಕ್ಷ್ಣಿದಾಸ್ ಪ್ರಭು ,ಜಯಪ್ರಕಾಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ಜರಗಿದ ವಿಜ್ಞಾನೋತ್ಸವ ಶಿಬಿರದಲ್ಲಿ ಯು. ಪಿ ವಿಭಾಗದ 400 ಕ್ಕೊ ಅಧಿಕ ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಾಗಿ ವರ್ಗೀಕರಿಸಲಾಯಿತು. ಶಿಕ್ಷಕರ ಮಾರ್ಗದರ್ಶನದಲ್ಲಿ ಚಲನೆಯ ತತ್ವ ಆಧಾರಿತ ಅನೇಕ ಚಟುವಟಿಕೆಯನ್ನು ವಿದ್ಯಾರ್ಥಿಗಳು ನಡೆಸಿದರು. ಅಲ್ಲದೆ ಪ್ರತಿ ಚಟುವಟಿಕೆಗಳಿಗೆ ಸಂಬಂದಧಿಸಿದ ಕಲಿಕಾ ಉತ್ಪನ್ನಗಳನ್ನು ತಯಾರಿಸಿದರು.
ಎರಡನೇ ದಿನ ಅಪರಹ್ನ ಜರಗಿದ ಕಲಿಕಾ ಉತ್ಪನ್ನಗಳ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಶತೆಯನ್ನು ಪ್ರಾಂಶುಪಾಲೆ ಮನೋರಮ ಕಿಣಿ ವಹಿಸಿದರು. ಮಂಜೇಶ್ವರ ಗಾಮ ಪಂಚಾಯತ್ ಸದಸ್ಯೆ ಸುಪ್ರೀಯ ಶೆಣೈ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಪ್ರೌಢ ಶಾಲಾ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಬಶೀರ್, ಮದರ್ ಪಿ.ಟಿ.ಎ ಅದ್ಯಕ್ಷೆ ಜಯಶ್ರೀ , ಹಿರಿಯ ಶಿಕ್ಷಕಿ ಕೃಷ್ಣಕುಮಾರಿ , ಸಿಬ್ಬಂದಿ ಒಕ್ಕೊಟದ ಕಾರ್ಯದರ್ಶಿ ಜಿ. ವಿರೇಶ್ವರ ಭಟ್ , ಮತ್ತಿತರು ಉಪಸ್ಥಿತರಿದ್ದರು, ವಿಜ್ಞಾನ ಶಿಕ್ಷಕರಾದ ಈಶ್ವರ ಕಿದೂರ್ ಸ್ವಾಗತಿಸಿದರು , ಯು.ಪಿ ವಿಭಾಗದ ಎಸ್.ಆರ್ ಜಿ ಸಂಚಾಲಕರಾದ ದಾಸಪ್ಪ ರೈ, ವಂದಿಸಿದರು. ಶಿಕ್ಷಕಿ ಉಷಕುಮಾರಿ ಸಮಗ್ರ ವರದಿಯನ್ನು ವಾಚಿಸಿದರು. ಶಿಕ್ಷಕ ಶಾಂತರಾಮ ಎಸ್ ಕಾರ್ಯಕ್ರಮ ನಿರೂಪಿಸಿದರು.
                   

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.