Tuesday 30 August 2016



ಎಸ್..ಟಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
    ಮಂಜೇಶ್ವರ ಅಗೋಸ್ಟ್ 15 ರಂದು ಎಸ್..ಟಿ ಶಾಲೆಯಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಪ್ರಬಂಧಕರಾದ ಶ್ರೇಯುತ ದಿನೇಶ್ ಶೆಣೈ ಅವರು ಧ್ವಜಾರೋಹಣಮಾಡಿ ಶುಭ ಹಾರೈಸಿದರು. ಅನಂತರ ಶಾಲಾ ಮುಖೋಪಾಧ್ಯಾಯಿನಿ ಶ್ರೇಮತಿ ಮನೋರಮ ಕಿಣಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಬಶೇರ್ ಅವರು ಶುಭ ಸಂದೇಶವನ್ನು ನೀಡಿದರು.
    ನಂತರ ಸ್ಕೌಚ್ ಮತ್ತು ಗೈಡ್ ದಳಗಳಿಂದ ಆಕಷ೯ಕ ಕವಾಯತು ನಡೆಯಿತು. ಕಳೆದಸಾಲಿನ ಮಾಚ್೯ SSLC ಪರೀಕ್ಷೆಯಲ್ಲಿ ಎ+ ಹಾಗೂ ಎ ಗ್ರೇಡ್ ನೊಂದಿಗೆ ತೇಗ೯ಡೆಯಾದ ವಿದ್ಯಾಥಿ೯ನಿಯರನ್ನು ಶಾಲಾ ಪ್ರಬಂಧಕರು ಸನ್ಮಾನಿಸಿದರು. ನಂತರ ಛದ್ಮವೇಷ ಸ್ಪಧೆ೯ ನಡೆಯಿತು. ನಂತರ ವಿದ್ಯಾಧಿ೯ಗಳು ದೇಶಭಕ್ತಿಗೀತೆ ಗಳನ್ನು ಹಾಡಿದರು.
ಸ್ಪಧೆ೯ಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಎಲ್ಲಾಅಧ್ಯಾಪಕ ಅಧ್ಯಾಪಕಿಯರು ಉಪಸ್ಥಿತರಿದ್ದರು. ಅಧ್ಯಾಪಕ ರಾದ ಜಿ .ವೀರೇಶ್ವರಭ಼ಟ್ ಕಾಯ೯ಕ್ರಮವನ್ನು ನಿರೂಪಿಸಿದರು. ದಾಸಪ್ಪ ರೈ ಸರ್ ಅವರು ವಂದಿಸಿದರು. ನಂತರ ಸಿಹಿತಿಂಡಿಯನ್ನು ವಿತರಿಸಲಾಯಿತು.ರಾಷ್ರ್ಟಗೀತೆಯೊಂದಿಗೆ ಕಾಯ೯ಕ್ರಮ ಕೊನೆಗೊಂಡಿತು.
                                INDEPENDENCE DAY 2016

                                INDEPENDENCE DAY 2016

Sunday 14 August 2016


ಎಸ್..ಟಿ.ಶಾಲೆಯಲ್ಲಿ ಶಾಲಾ ಪಾಲಿ೯ಮೆಂಟು 2016-2017
11-8-2016 ಎಸ್..ಟಿ ಶಾಲೆಯಲ್ಲಿ ಶಾಲಾ ಪಾಲಿ೯ಮೆಂಟು ಚುನಾವಣೆ ಜರಗಿತು. ಪ್ರತಿ ತರಗತಿವಾರು ನಾಯಕ ಸ್ಥಾ ನಕ್ಕೆ ಸುಮಾರು 14 ತರಗತಿಗಳಲ್ಲಿ ಚುನಾವಣೆ ನಡೆಯಿತು. ಉಳಿದ ತರಗತಿಗಳಲ್ಲಿ ಅವಿರೋಧ ಆಯ್ಕೆ ನಡೆಯಿತು. ಚುನಾವಣಾ ಫಲಿತಾಂಶವನ್ನು ಅಭ್ಯಥಿ೯ಗಳು ಹಾಗೂ ವಿದ್ಯಾಥಿ೯ಗಳ ಸಮ್ಮುದಲ್ಲಿ ನಡೆಸಿ ವಿಜೇತರನ್ನು ಅಧ್ಯಾಪಕರು ಘಷಿಸಿದರು. ಚುನಾವಣಾ ಪ್ರಕ್ರಿಯೆಯು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಿತು.
12 ಗಂಟೆಗೆ ಸರಿಯಾಗಿ ಶಾಲಾ ಪಾಲಿ೯ಮೆಂಟಿನ ರಚನೆ ನಡೆಯಿತು. ಹಾಗೂ ಪ್ರಥಮ ಅಧಿವೇಶನ ನಡೆಯಿತು.ಪ್ರೌಢಶಾಲಾ ವಿಭಾಗದಿಂದ ಶಾಲಾ ನಾಯಕಿಯಾಗಿ ಕುಮಾರಿ ರೆನಿಶಾ ಡಿಸೋಜ ಹಾಗೂ ಹೈಯರ್ ಸೆಕೆಂಡರಿ ವಿಭಾಗದಿಂದ ಮಹಮ್ಮದ್ ಫಾರೂಕ್ ಆಯ್ಕೆಗೊಂಡರು.ಹಾಗೊ ವಿವಿಧ ಮಂತ್ರಿಗಳನ್ನು ಆಯ್ಕೆಗೊಳಿಸಲಾಯಿತು. ಬಳಿಕ ನಡೆದ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕೃಷ್ಣಕುಮಾರಿ ಅವರು ಪ್ರತಿಜ್ಞೆಬೋಧಿಸಿದರು. ನಂತರ ಶಾಲಾ ಶಿಸ್ತನ್ನು ಕಾಪಾಡುವಲ್ಲಿ ಮಂತ್ರಿಮಂಡಲದ ಜವಾಬ್ದಾರಿ ಯನ್ನೂಕೆಲಸಕಾಯ೯ಗಳನ್ನೂ ತಿಳಿಸಿದರು. ಚುನಾವಣೆಾ ಅಧಿಕಾರಿಯಾಗಿ ಅಧ್ಯಾಪಕ ವಿರೇಶ್ವರ ಭಟ್ ಅವರು ನಿವ೯ಹಿಸಿದರು. ಹೆಚ್ಚಿನ ಅಧ್ಯಾಪಕ , ಅಧ್ಯಾಪಕಿಯರು ಉಪಸ್ಥಿತರಿದ್ದು ಸಹಕರಿಸಿದರು. ಶಾಲಾ ನಾಯಕ ಮಹಮ್ಮದ್ ಫಾರೂಕ್ ಧನ್ಯವಾದ ನೀಡಿದರು.

Thursday 11 August 2016




ಸ್ವಾ ಸ್ಥ್ಯ ಸಂಕಲ್ಪ ಯೋಜನೆ ಕಾಯ೯ಕ್ರಮ

ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಇದರ ಆಶ್ರಯದಲ್ಲಿ ತಾರೀಕು 4.8.2016 ರಂದು ಎಸ್..ಟಿ ಶಾಲೆಯ ಅನಂತ ವಿದ್ಯಾ ಸಭಾಂಗಣದಲ್ಲಿ ಸ್ವಾ ಸ್ಥ್ಯ ಸಂಕಲ್ಪ ಯೋಜನೆ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಸರಗೋಡು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲು ದೀಪ ಬೆಳಗಿಸಿ ಉದ್ಘಾಟಿಸಿದರು.
ದುಶ್ಚಟಗಳಿಂದ ಆಗುವ ಅನಾಹುತಗಳ ಕುರಿತಾಗಿ ತಿಳಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಈಶ್ವರ ಮಾಸ್ಟರ್ ಕುಂಜತ್ತೂರು ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರು ಸ್ವಾ ಸ್ಥ್ಯ ಸಂಕಲ್ಪ ಯೋಜನೆಯ ಕಾಯ೯ಕಲಾಪಗಳನ್ನು ಸವಿವರವಾಗಿ ತಿಳಿಸಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಮುಖ್ಯೋಪಾಧ್ಯಾಯಿನಿ
ಕೃಷ್ಣಕುಮಾರಿ ಟೀಚರ್ ವಹಿಸಿದ್ದರು. ಯೋಜನೆಯ ಕಾಯ೯ಕತೆ೯ಯರಾದ ಸುನೀತ, ಅನಿತ,ಸುರೇಖ, ಉಪಸ್ಥಿತರಿದ್ದರು.
ಸುರೇಖ ಕಾಯ೯ಕ್ರಮವನ್ನು ನಿರೂಪಿಸಿದರು. ಅಧ್ಯಾಪಕರಾದ ಜಿ ವಿೀರೇಶ್ವರಭಟ್ ಸ್ವಾಗತಿಸಿ ದಾಸಪ್ಪ ರೈ ವಂದಿಸಿದರು.

Sunday 7 August 2016


ಎಸ್..ಟಿ.ಹೈಯರ್ ಸೆಕೆಂಡರಿ ಶಾಲೆ ರಕ್ಷಕ ಶಿಕ್ಷಕ ಸಂಘದ ಮಹಾಸಭೆ
ಮಂಜೇಶ್ವರ: ಎಸ್..ಟಿ.ಹೈಯರ್ ಸೆಕೆಂಡರಿ ಶಾಲೆ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ ಜರಗಿತು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಬಶೀರ್.ಬಿ. ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಗ್ರಾಮ ಪಂಚಾಯತು ಸದಸ್ಯೆ
ಸುಪ್ರಿಯಾ ಶೆಣೈ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷೆ ಜಯಶ್ರೀ, ಸಮಿತಿ ಸದಸ್ಯರಾದ ಮೊೈದಿನ್ ಕುಞಿ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದಭ೯ದಲ್ಲಿ 2016-2017ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಸವಾ೯ನು ಮತದೊಂದಿಗೆ ಆರಿಸಲಾಯಿತು. ಮತ್ತು ನೂತನ ಮಧ್ಯಾಹ್ನದ ಊಟದ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಾಪಕರಾದ ಕಿರಣ್ ಕುಮಾರ್ ,ಶ್ಯಾಮ ಕೃಷ್ಣ ಪ್ರಕಾಶ್ ಹಾಗೂ ಶಾಂತಾರಾಮ್ ಶಾಲೆಗೆ ಸಂಬಂಧ ಪಟ್ಟಂತಹ ಮಾಹಿತಿಯನ್ನು ನೀಡಿದರು.
ಅಧ್ಯಾಪಕ ಗಣೇಶ್ ಪ್ರಸಾದ್ ನಾಯಕ್ ಪ್ರಾಥ ೯ನೆ ಹಾಡಿದರು. ಹಿರಿಯ ಅಧ್ಯಾಪಕಿ ಕೃಷ್ಣಕುಮಾರಿ ಸ್ವಾಗತಿಸಿದರು. ಸಂಘದ ಕಾಯ೯ದಶಿ೯ ಶ್ರೀಮತಿ ಮನೋರಮ ಕಿಣಿ ವಾಷಿ೯ಕ ಲೆಕ್ಕ ಪತ್ರವನ್ನು ಮಂಡಿಸಿದರು. ಅಧ್ಯಾಪಕ ಕಿರಣ್ ಕುಮಾರ್ ವಂದಿಸಿದರು. 2016-17 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ದುಲ್ ಬಶೀರ್.ಬಿ ಅವರು ಪುನರಾಯ್ಕೆಗೊಂಡರು. ಮತ್ತು ಉಪಾಧ್ಯಕ್ಷರಾಗಿಮೊೈದಿನ್ ಕುಂಞಿ ಆಯ್ಕೆಯಾದರು.




Monday 1 August 2016


bala gangadharanatha thilaka janmadinacharane  chitra rachana .

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.