Friday 29 June 2018

ಮಂಜೇಶ್ವರದ ಎಸ್ ಎ ಟಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ 2018

ಮಂಜೇಶ್ವರದ ಎಸ್ ಎ ಟಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ತಾರೀಕು 21-6-18 ಗುರುವಾರ ಶಾಲೆಯ ಅನಂತ ಜ್ಞಾನ ಸಭಾಂಗಣದಲ್ಲಿ ಜರುಗಿತು. 
ಜಮುನಾ ಸೇವಾ ಸಂಘದ ಕಾಸರಗೋಡು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಸದಾಶಿವ ಕಡಂಬಾರು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಯೋಗದಿನವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು.  ಮುಖ್ಯೋಪಾಧ್ಯಾಯರಾದ ಮುರಳಿ ಕೃಷ್ಣರವರು ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತೇಜಸ್ ಕಿರಣ್, ಸಿಬ್ಬಂದಿ ಕಾರ್ಯದರ್ಶಿ ಶ್ರೀಮತಿ ಸುಕನ್ಯಾ ಶಾಲೆಯ  ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ದೈಹಿಕ ಶಿಕ್ಷಕ ಶ್ಯಾಮ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ಅಧ್ಯಾಪಕರಾದ ಲಕ್ಮೀದಾಸ್ ವಂದಿಸಿದರು. ಅಧ್ಯಾಪಕರಾದ ಈಶ್ವರ ಕಿದೂರು, ಪೂರ್ಣಿಮಾ ನಾಯಕ್, ಮಹೇಶ ಕೆ ವಿ, ಶಾಂತಾರಾಮ, ಗಣೇಶ್ ನಾಯಕ್, ಮಲ್ಲಿಕಾ ಮೊದಲಾದವರು ಉಪಸ್ಥಿತರಿದ್ದರು. ಮಕ್ಕಳಿಗೆ ಯೋಗ ದಿನದ ಮಹತ್ವವನ್ನು ಸಂಪನ್ಮೂಲ ವ್ಯಕ್ತಿ ಸದಾಶಿವ ಕಡಂಬಾರು ವಿವರಿಸಿ, ಯೋಗಗಳ ಪ್ರಾತ್ಯಕ್ಷಿಕೆ ನೀಡಿದರು.
Attachments area

ಎಸ್.ಎ.ಟಿ.ಪ್ರೌಢ ಶಾಲೆ ಮಂಜೇಶ್ವರವಿಶ್ವ ಪರಿಸರ ದಿನಾಚರಣೆ 2018ಜೂನ್ 5


ಎಸ್.ಎ.ಟಿ.ಪ್ರೌಢ ಶಾಲೆಯ ಪ್ರವೇಶೋತ್ಸವ 2018


ಎಸ್.ಎ.ಟಿ.ಪ್ರೌಢ ಶಾಲೆಯ 2018ಜೂನ್ 1 ಶಾಲಾ ಪ್ರವೇಶೋತ್ಸವ ಅನಂತ ಜ್ಞಾನ ಸಭಾಂಗಣದಲ್ಲಿ ವಿಧ್ಯುಕ್ತವಾಗಿ ನೆರವೇರಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರು ಅಬ್ದುಲ್ ಬಷೀರ್ ಶುಭ ಹಾರೈಸಿದರು.ಮುಖ್ಯೋಪಾಧ್ಯಾಯರಾದ ಮುರಳೀಕೃಷ್ಣ ಮಕ್ಕಳಿಗೆ ಹಿತವಚನಗೈದರು.ಶಾಲಾ ಎಸ್. ಆರ್.ಜಿ.ಗಣೇಶ್ ನಾಯಕ್ ಸ್ವಾಗತಿಸಿ, ಶ್ರೀಮತಿ ಸುಕನ್ಯ ಟೀಚರ್ ವಂದಿಸಿದರು.ಜಿ.ವೀರೇಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶ್ಯಾಮ ಕೃಷ್ಣ ಪ್ರಕಾಶ್,ಸುಮತಿ ಟೀಚರ್,ಮಹೇಶ್ ಕೆ.ವಿ.,
 ಶ್ರೀದಾಸಪ್ಪ ರೈ,ಅಜಿತ್ ಕುಮಾರ್ ಶೆಟ್ಟಿ. ಕಲಾ  ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಬೇಳ ಉಪಸ್ಥಿತರಿದ್ದರು. ಐದನೆಯ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಿಸಲಾಯಿತು.

Attachments area

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.