Thursday 11 September 2014

ಶ್ರೀ ಶಾರದೆಗೆ ರಜತ ಪ್ರಭಾವಳಿ ಸಮರ್ಪಣೆ


ಎಸ್. .ಟಿ. ಶಾಲೆಯ ಶ್ರೀ ಶಾರದೆಗೆ ರಜತ ಪ್ರಭಾವಳಿ ಸಮರ್ಪಣೆ
ಮಂಜೇಶ್ವರ - ಎಸ್. .ಟಿ ಶಾಲೆಯ ಶಾರದೆಗೆ ಮಂಜೇಶ್ವರ ನಾಗಮಂಡಲೋತ್ಸವ -2014ರ ಪರವಾಗಿ ಶಾಲೆಯ ಶ್ರೀ ಶಾರದೆಗೆ ರಜತ ಪ್ರಭಾವಳಿಯನ್ನು ಇತ್ತೀಚೆಗೆ ಮಂಜೇಶ್ವರ ನಾಗಮಂಡಲೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮಂಜೇಶ್ವರ ಗ್ರಾಮಪಂಚಾಯತ್ ಸದಸ್ಯರಾದ ಹರಿಶ್ಚಂದ್ರ ಎಂ ಶಾಲಾ ಪ್ರಬಂಧಕರಾದ ದಿನೇಶ್ ಶೆಣೈ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀಮತ್ ಅನಂತೇಶ್ವರ ದೇವಳದ ಕೋಶಾಧಿಕಾರಿಯಾದ ಸುರೇಶ್ ಶೆಣೈ ,.ಪ್ರೌಢ ಶಾಲಾ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ , ಎಂ ವಿಠಲ ದಾಸ್ ಭಟ್, ಅನಿಲ್ ಬಾಳಿಗ, ಸಲಹಾ ಸಮಿತಿ ಸದಸ್ಯೆ ಲಿಲ್ಲಿ ಬಾಯಿ ಟೀಚರ್ ಮುಂತಾದವರು ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ .ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಸುದತಿ.ಬಿ, ಹಿರಿಯ ಶಿಕ್ಷಕರಾದ ಪುಂಡಲಿಕ ನಾಯಕ್ , ಶಿಕ್ಷಕಿ ಶೈಲಜ, ಶಾರದ ಪೂಜ ಸಮಿತಿಯ ಸಂಚಾಲಕರಾದ ಪುರ್ಣಯ್ಯ ಪುರಾಣಿಕ್ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.