Saturday, 20 July 2019

ಎಸ್. ಎ.ಟಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನೇಜಿ ನೆಡುವ ಮೂಲಕ ಕೃಷಿಯ ಮಹತ್ವದ ಬಗ್ಗೆ ಮಾಹಿತಿ ಪಡೆದರುತಾರೀಕು 12/7/19 ರಂದು ಮಂಜೇಶ್ವರದ ಎಸ್ ಎ ಟಿ ಶಾಲೆಯ ಸ್ಕೌಟ್ ಗೈಡ್ ದಳದ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಶ್ರೀಮದ್ ಅನಂತೇಶ್ವರ ದೇವಳದ ಗದ್ದೆಯಲ್ಲಿ  ಮಕ್ಕಳೊಂದಿಗೆ ನೇಜಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
      ಕೃಷಿಕರಾದ ಸದಾಶಿವ ಮೂಲ್ಯರ ನೇತೃತ್ವದಲ್ಲಿ ಮಕ್ಕಳು ನೇಜಿನೆಡುವ ಪ್ರಾತ್ಯಕ್ಷಿಕೆ ಪಡೆದರು.ಈ ಸಂದರ್ಭದಲ್ಲಿ ಮಂಜೇಶ್ವರದ ಸಹಾಯಕ ಕೃಷಿ ಅಧಿಕಾರಿಯಾದ ಶ್ರೀ ಶಶೀ0ದ್ರನ್ ಮತ್ತು ಶಿವಪ್ರಸಾದ್ ಕೃಷಿಯಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀ ಮುರಳಿಕೃಷ್ಣ ಎನ್ ,ಗೈಡ್ ಅಧ್ಯಾಪಿಕೆಯರಾದ  ಶ್ರೀಮತಿ ಸುಕನ್ಯಾ ಕೆ ಟಿ ,ಶ್ರೀಮತಿ ಉಷಾ ಕುಮಾರಿ ,ಸ್ಕೌಟ್ ಅಧ್ಯಾಪಕ  ಶ್ರೀ ಲಕ್ಷ್ಮೀ ದಾಸ್ ಪ್ರಭು ಸಹಕರಿಸಿದರು.
ವಾಚನಾ ಪಕ್ಷಾಚರಣೆ ,ಎಸ್.ಎ.ಟಿ.ಪ್ರೌಢ ಶಾಲೆ ಎಸ್.ಎ.ಟಿ.ಪ್ರೌಢ ಶಾಲೆ ಮಂಜೇಶ್ವರ 
 ತಾ.19.6.19   ರಂದು ಪಿ.ಎನ್. ಪಣಿಕ್ಕರ್ ಸಂಸ್ಮರಣ ದಿನದ ಅಂಗವಾಗಿ ವಾಚನಾ ಪಕ್ಷಾಚರಣೆ  ಎಂಬ ಕಾರ್ಯಕ್ರಮ ನಡೆಯಿತು.
 ಈ ಸಂದರ್ಭದಲ್ಲಿ ಸ್ಟಾಪ್ ಕಾರ್ಯದರ್ಶಿ ಈಶ್ವರ ಕಿದೂರ್ ,ಕಿರಣ್ ಮಾಸ್ಟರ್,ಪರಮೇಶ್ವರೀ ಟೀಚರ್,ಎಸ್.ಆರ್.ಜಿ.ನಾರಾಯಣ
ಗೋಪಾಲಕೃಷ್ಣ ಹೆಗಡೆ, ಆರತಿ ಟೀಚರ್, ಜೆ.ಪಿ.ಶೆಟ್ಟಿ ಬೇಳ  ಉಪಸ್ಥಿತರಿದ್ದರು. ಆರತಿ ಟೀಚರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಗೆ  ನಂತರ ಶಾಲಾವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಯಿತು ಮತ್ತು ಪುಸ್ತಕ ಪ್ರದರ್ಶನ  ರಸಪ್ರಶ್ನೆ ಸ್ಪರ್ಧೆಗಳ ನ್ನು ನಡೆಸಲಾಯಿತು. 
 ಮಂಜೇಶ್ವರ ಎಸ್. ಎ.ಟಿ ಹೈಸ್ಕೂಲಿನಲ್ಲಿ ಯೋಗ ದಿನಾಚರಣೆ ವಿಶ್ವಯೋಗದಿನಾಚರಣೆ
ಎಸ್  ಎ  ಟಿ ಪ್ರೌಢಶಾಲೆಯಲ್ಲಿ ಯೋಗದಿನಾಚರಣೆಯು   ಸಂಭ್ರಮ ದಿಂದ ಜರುಗಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯೋಗಸಪ್ತಾಹಶಿಬಿರವನ್ನು ಯೋಗಾಚಾರ್ಯರಾದ ಶ್ರೀ ಸದಾಶಿವ  ಕಡಂಬಾರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇಂದು ಮಾತ್ರವಲ್ಲ ಪ್ರತಿದಿನವೂ ಯೋಗ ಮಾಡಬೇಕು ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮುರಳಿಕ್ರಷ್ಣ ಅವರು ಮೂಲ ಉದ್ದೇಶ ವನ್ನು ತಿಳಿಸಿಹೇಳಿದರು. ಅನಂತರ ಯೋಗಾಧ್ಯಾಪಕ ಶ್ರೀ ಸದಾಶಿವರು ಒಂದು ತಾಸು ಯೋಗ ಶಿಬಿರ ನಡೆಸಿ ಒಂದು ವಾರದ ಶಿಬಿರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಪಲ್ಲವಿ ಮತ್ತು ಮೇಘಶ್ರೀ ಇವರ ಪ್ರಾರ್ಥನೆ ಹಾಗೂ ಶಾಲಾ ಸಿಬ್ಬಂದಿ ಕಾರ್ಯದರ್ಶಿ ಶ್ರೀ ಈಶ್ವರ  ಮಾಸ್ಟರ್ ರವರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮ .ಶಾಲಾ ಪ್ರೌಢಶಾಲಾ ಎಸ್ ಆರ್ ಜೀ ಸಂಚಾಲಕ ಶ್ರೀ ನಾರಾಯಣ ಗೋಪಾಲಕೃಷ್ಣ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ದೈಹಿಕ ಶಿಕ್ಷಕ ಶ್ರೀ ಶ್ಯಾಮಕ್ರಷ್ಣ ಪ್ರಕಾಶ್,ಕಲಾ ಅಧ್ಯಾಪಕ ಶ್ರೀ  ಜಯಪ್ರಕಾಶ್ ಶೆಟ್ಟಿ ಬೇಳ, ಮಹೇಶ್ .ಕೆ.ವಿ., ಅಜಿತ್ ಕುಮಾರ್   ಹಾಗೂ ಇತರ ಅಧ್ಯಾಪಕರು ಸಹಕರಿಸಿ ಶಾಲಾ ಯು. ಪಿ .ಎಸ್ .ಆರ್. ಜಿ.ಸಂಚಾಲಕರಾದ  ಶ್ರೀ ಗಣೇಶ್ ಸರ್ ರವರ ಧನ್ಯವಾದದೊಂದಿಗೆ ಮುಕ್ತಾಯ ವಾಯಿತು

Thursday, 6 June 2019

ಶಾಲಾಪ್ರವೇಶೋತ್ಸವ ಕಾರ್ಯಕ್ರಮ
 ಎಸ್ ಎ ಟಿ ಶಾಲೆಗಳು

ಎಸ್ ಎ ಟಿ ಶಾಲೆ ಮಂಜೇಶ್ವರ ಮತ್ತು ಎಸ್ ಎ ಟಿ ಎಲ್ ಪಿ ಶಾಲೆ ಇದರ ಶಾಲಾ ಪ್ರವೇಶೋತ್ಸವವು ತಾರೀಕು 6-6-2019 ರಂದು ಜಂಟಿಯಾಗಿ ನೆರವೇರಿತು. ಬೆಳಗ್ಗೆ ಶಾಲಾ ಅಸೆಂಬ್ಲಿಯ ಬಳಿಕ ನಡೆದ ಘೋಷಯಾತ್ರೆಯೊಂದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಶಿಶು ಸ್ನೇಹಿ ರೀತಿಯಲ್ಲಿ ಅಲಂಕರಿಸಿದ ಅನಂತ ವಿದ್ಯಾ ಸಭಾಂಗಣದಲ್ಲಿ, ಬಳಿಕ ಸಭಾ ಕಾರ್ಯಕ್ರಮ ಜರಗಿತು.ವಾರ್ಡ್ ಮೆಂಬರ್ ಸುಪ್ರಿಯಾ ಶೆಣೈ, ಹೈಸ್ಕೂಲ್ ಪಿ ಟಿ ಎ ಅಧ್ಯಕ್ಷ ಅಬ್ದುಲ್ ಬಷೀರ್,ಎಲ್ ಪಿ,ಪಿ ಟಿ ಎ ಅಬ್ದುಲ್ಲ ಗುಡ್ಡೇಕೇರಿ ಮತ್ತು ಪಿ ಟಿ ಎ ಪದಾಧಿಕಾರಿಗಳು ಉಪಸ್ಥಿತರಿದ್ದರು.ಶಾಲಾ ಪ್ರಬಂಧಕರಾದ   ಕೃಷ್ಣ ಭಟ್ ರವರು ಅಧ್ಯಕ್ಷತೆ ವಹಿಸಿದರು. ಎಲ್ ಪಿ, ಪಿ ಟಿ ಎ ವತಿಯಿಂದ ಮತ್ತು ಶಾಲಾ ಆಢಳಿತ ಮಂಡಳಿ ವತಿಯಿಂದ ಮಕ್ಕಳಿಗೆ ಕಲಿಕೋಪಕರಣ ವಿತರಿಸಲಾಯಿತು. ಮುಖ್ಯೋಪಾಧ್ಯಾಯರಾದ ಮುರಳಿ ಕೃಷ್ಣ ಸ್ವಾಗತಿಸಿದರು,ಎಲ್ ಪಿ ಮುಖ್ಯೋಪಾಧ್ಯಾಯ ತೇಜೇಶ್ ಕಿರಣ್ ಹೆತ್ತವರಿಗೆ ಸೂಚನೆಗಳನ್ನು ಕೊಟ್ಟರು. ಎಸ್ ಆರ್ ಜಿ ಸಂಚಾಲಕ ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.ಶ್ಯಾಮ್ ಕೃಷ್ಣ ರವರು ವಂದಿಸಿದರು. ಶಾಲಾವಿದ್ಯಾರ್ಥಿಗಳು, ರಕ್ಷಕರು ಮತ್ತು ಎರಡೂ ಶಾಲೆಯ ಹಲವು ಅಧ್ಯಾಪಕರು  ಉಪಸ್ಥಿತರಿದ್ದರು.ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Thursday, 7 March 2019

ನವೆಂಬರ್ 18ರಂದು ನಡೆದ ರಾಮಾಯಣ ಪರೀಕ್ಷೆಯಲ್ಲಿ   ಎಸ್. ಎ.ಟಿ.ಪ್ರೌಢ ಶಾಲೆಯ 9ನೇ ತರಗತಿಯ ಕುಮಾರಿ ಚೈತ್ರ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನುಗಳಿಸಿದ್ದಾಳೆ.

Sunday, 25 November 2018

ಕಾಸರಗೋಡು ಜಿಲ್ಲಾ ಕರಕುಶಲ ಮೇಳದ ಕೊಡೆ ನಿರ್ಮಾಣ ವಿಭಾಗದಲ್ಲಿ ಪ್ರಥಮ Aಗ್ರೇಡ್ ನೊಂದಿಗೆ  ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ  Aಗ್ರೇಡ್  ಪಡೆದು ಎಸ್.ಎ.ಟಿ ಪ್ರೌಢಶಾಲೆಯ ಹತ್ತನೆಯ ತರಗತಿಯ ಮೊಹಮ್ಮದ್ ಅಫ್ರಾನ್ ಶಾಲೆಗೆ ಕೀರ್ತಿ ತಂದಿದ್ದಾನೆ.

Thursday, 11 October 2018

October 2 .2018 ಎಸ್. ಎ.ಟಿ.ಶಾಲೆಯಲ್ಲಿ       ಮಹಾತ್ಮಗಾಂಧಿಜಯಂತಿ ಆಚರಣೆ .

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.