Saturday 20 July 2019

 ಮಂಜೇಶ್ವರ ಎಸ್. ಎ.ಟಿ ಹೈಸ್ಕೂಲಿನಲ್ಲಿ ಯೋಗ ದಿನಾಚರಣೆ ವಿಶ್ವಯೋಗದಿನಾಚರಣೆ
ಎಸ್  ಎ  ಟಿ ಪ್ರೌಢಶಾಲೆಯಲ್ಲಿ ಯೋಗದಿನಾಚರಣೆಯು   ಸಂಭ್ರಮ ದಿಂದ ಜರುಗಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯೋಗಸಪ್ತಾಹಶಿಬಿರವನ್ನು ಯೋಗಾಚಾರ್ಯರಾದ ಶ್ರೀ ಸದಾಶಿವ  ಕಡಂಬಾರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇಂದು ಮಾತ್ರವಲ್ಲ ಪ್ರತಿದಿನವೂ ಯೋಗ ಮಾಡಬೇಕು ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮುರಳಿಕ್ರಷ್ಣ ಅವರು ಮೂಲ ಉದ್ದೇಶ ವನ್ನು ತಿಳಿಸಿಹೇಳಿದರು. ಅನಂತರ ಯೋಗಾಧ್ಯಾಪಕ ಶ್ರೀ ಸದಾಶಿವರು ಒಂದು ತಾಸು ಯೋಗ ಶಿಬಿರ ನಡೆಸಿ ಒಂದು ವಾರದ ಶಿಬಿರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಪಲ್ಲವಿ ಮತ್ತು ಮೇಘಶ್ರೀ ಇವರ ಪ್ರಾರ್ಥನೆ ಹಾಗೂ ಶಾಲಾ ಸಿಬ್ಬಂದಿ ಕಾರ್ಯದರ್ಶಿ ಶ್ರೀ ಈಶ್ವರ  ಮಾಸ್ಟರ್ ರವರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮ .ಶಾಲಾ ಪ್ರೌಢಶಾಲಾ ಎಸ್ ಆರ್ ಜೀ ಸಂಚಾಲಕ ಶ್ರೀ ನಾರಾಯಣ ಗೋಪಾಲಕೃಷ್ಣ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ದೈಹಿಕ ಶಿಕ್ಷಕ ಶ್ರೀ ಶ್ಯಾಮಕ್ರಷ್ಣ ಪ್ರಕಾಶ್,ಕಲಾ ಅಧ್ಯಾಪಕ ಶ್ರೀ  ಜಯಪ್ರಕಾಶ್ ಶೆಟ್ಟಿ ಬೇಳ, ಮಹೇಶ್ .ಕೆ.ವಿ., ಅಜಿತ್ ಕುಮಾರ್   ಹಾಗೂ ಇತರ ಅಧ್ಯಾಪಕರು ಸಹಕರಿಸಿ ಶಾಲಾ ಯು. ಪಿ .ಎಸ್ .ಆರ್. ಜಿ.ಸಂಚಾಲಕರಾದ  ಶ್ರೀ ಗಣೇಶ್ ಸರ್ ರವರ ಧನ್ಯವಾದದೊಂದಿಗೆ ಮುಕ್ತಾಯ ವಾಯಿತು

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.