Wednesday 2 July 2014

ರಕ್ಷಕ – ಶಿಕ್ಷಕ ಸಂಘದ ಮಹಾಸಭೆ


ಎಸ್..ಟಿ.ಪ್ರೌಢ ಶಾಲೆಯಲ್ಲಿ ರಕ್ಷಕ – ಶಿಕ್ಷಕ ಸಂಘದ ಮಹಾಸಭೆ

ಮಂಜೇಶ್ವರ - ಎಸ್..ಟಿ.ಪ್ರೌಢ ಶಾಲೆಯ ರಕ್ಷಕ – ಶಿಕ್ಷಕ ಸಂಘದ ಮಹಾಸಭೆಯು ಇತ್ತೀಚೆಗೆ ಶಾಲಾ ಅನಂತ ವಿದ್ಯಾ ಸಭಾಂಗಣದಲ್ಲಿ ಜರಗಿತು. ಶಾಲಾ ಮುಖ್ಯೋಪಾಧ್ಯಾಯನಿ ಮನೋರಮ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾದ ನಿತಿನ್ ಚಂದ್ರ ಪೈ ಅಧ್ಯಕ್ಷತೆಯನ್ನು ವಹಿಸಿದರು. ಈ ಸಭೆಯಲ್ಲಿ ರಕ್ಷಕ – ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ನಿತಿನ್ ಚಂದ್ರ ಪೈ, ಉಪಾಧ್ಯಕ್ಷರಾಗಿ ಹೇಮಲತಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಯಾನಂದ ಪೂಜಾರಿ, ರಮಾನಂದ ಶೆಟ್ಟಿ , ಮೊಹಮ್ಮದ್ ಮುಸ್ತಾಫ ಮತ್ತು ಪುಷ್ಪಾ ಆಯ್ಕೆಯಾದರು. ಹಿರಿಯಶಿಕ್ಷಕರಾದ ಪುಂಡಲೀಕ ನಾಯಕ್ ವರದಿ ವಾಚಿಸಿದರು. ನಾಗೇಶ್ ವಿ. ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.ಶಾಲಾ ಪ್ರಬಂಧಕರಾದ ಎ೦. ದಿನೇಶ್ ಶೆಣೈ , ಸಲಹಾ ಸಮಿತಿಯ ಸದಸ್ಯರಾದ ಲಿಲ್ಲಿ ಬಾಯಿ ಟೀಚರ್, ಮೊಹಮ್ಮದ್ ಮುಸ್ತಾಫ ಅಬ್ದುಲ್ ಬಶೀರ್, ಲೀಲಾಧರ ಐಲ್ ಹಾಗೂ ಮಲ್ಲಿಕಾ ಉಪಸ್ಥಿತರಿದ್ದರು. ಶಿಕ್ಷಕರಾದ ಮುರಳಿಕೃಷ್ಣ ಧನ್ಯವಾದವಿತ್ತರು.ವಿರೇಶ್ವರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

No comments:

Post a Comment

2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.