Saturday, 3 June 2017

ಪ್ರವೇಶೋತ್ಸವ 2017 - 18



ಶಾಲಾ ಪ್ರವೇಶೋತ್ಸವ - 2017

ಎಸ್.. ಟಿ ಪ್ರೌಢ ಶಾಲಾ ಪ್ರವೇಶೋತ್ಸವು ಪೂರ್ವಹ್ನ 9.30 ಕ್ಕೆ ಸರಿಯಾಗಿ ಶಾಲಾ ಅಸೆಂಬ್ಲಿಯ ನಂತರ ಅದ್ದೂರಿಯಾದ ಮೆರವಣಿಗೆಯೊಂದಿಗೆ ಆರಂಭವಾಯಿತು. 5ನೇ ತರಗತಿ ಹಾಗೂ ಇತರ ತರಗತಿಗೆ ದಾಖಲಾದ ನೂತನ ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಶಾಲಾ ಸಭಾಂಗಕ್ಕೆ ಬರಮಾಡಿಕೊಳ್ಳಲಾಯ್ತು. ಪಂಚಾಯತ್ ವಾರ್ಡ್ ಸದಸ್ಯೆ ಸುಪ್ರಿಯ ಶೆಣೈಯವರು ಶಾಲಾ ಪ್ರವೇಶೋತ್ಸವವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಕೃಷ್ಣ ಕುಮಾರಿಯವರು ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು. ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಅಬ್ದುಲ್ ಬಶೀರ್ ಶುಭಾಶಂಸೆಗೈದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ನಡೆಯಿತು. ಹಿರಿಯ ಶಿಕ್ಷಕ ಮುರಳಿ ಕೃಷ್ಣ ಎನ್ . ಸ್ವಾಗತಿಸಿದರೆ ಕನ್ನಡ ಶಿಕ್ಷಕಿ ಆರತಿ ವಂದಿಸಿದರು. ಸಿಬ್ಬಂದಿ ವರ್ಗದ ಕಾರ್ಯದರ್ಶಿ ಜಿ. ವಿರೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

Wednesday, 1 March 2017


       
ಎಸ್. . ಟಿ ಶಾಲೆಯಲ್ಲಿ ವಿಜ್ಞಾನೋತ್ಸವ - 2017

ಮಂಜೇಶ್ವರ : ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಯ ಆಸಕ್ತಿಯನ್ನು ಸದಾಜಾಗೃತಗೊಳಿಸುವ ಸದುದ್ದೇಶದೊಂದಿಗೆ ರೂಪಿಸಲಾಗಿರುವ ಶೈಕ್ಷಣಿಕ ಸಮಗ್ರಯೋಜನೆ ವಿಜ್ಞಾನೋತ್ಸವ - 2017 ವನ್ನು ಇಲ್ಲಿನ ಎಸ್. . ಟಿ ಶಾಲೆಯಲ್ಲಿ ಇತ್ತೀಚೆಗೆ ಜರಗಿಸಲಾಯಿತು.
ಸರ್ವಶಿಕ್ಷಾ ಅಭಿಯಾನ ಕಾಸರಗೋಡು ಮತ್ತು ಬಿ. ಆರ್ . ಸಿ ಮಂಜೇಶ್ವರ ಇವುಗಳ ಜಂಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶಾಲಾಮಟ್ಟದ ವಿಜ್ಞಾನೋತ್ಸವ ವನ್ನು ಪ್ರಾಂಶುಪಾಲೆ ಮನೋರಮ ಕಿಣಿ ರಾಕೆಟ್ ಪಟಾಕಿ ಹಾರಿಸುವುದರೊಂದಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಕೃಷ್ಣಕುಮಾರಿ , ಸಿಬ್ಬಂದಿ ಒಕ್ಕೊಟದ ಕಾರ್ಯದರ್ಶಿ ಜಿ. ವಿರೇಶ್ವರ ಭಟ್ , ಯು.ಪಿ ವಿಭಾಗದ ಎಸ್.ಆರ್ ಜಿ ಸಂಚಾಲಕರಾದ ದಾಸಪ್ಪ ರೈ, ವಿಜ್ಞಾನ ಶಿಕ್ಷಕರಾದ ಈಶ್ವರ ಕಿದೂರ್ , ಲಕ್ಷ್ಣಿದಾಸ್ ಪ್ರಭು ,ಜಯಪ್ರಕಾಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಎರಡು ದಿನಗಳ ಕಾಲ ಜರಗಿದ ವಿಜ್ಞಾನೋತ್ಸವ ಶಿಬಿರದಲ್ಲಿ ಯು. ಪಿ ವಿಭಾಗದ 400 ಕ್ಕೊ ಅಧಿಕ ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳಾಗಿ ವರ್ಗೀಕರಿಸಲಾಯಿತು. ಶಿಕ್ಷಕರ ಮಾರ್ಗದರ್ಶನದಲ್ಲಿ ಚಲನೆಯ ತತ್ವ ಆಧಾರಿತ ಅನೇಕ ಚಟುವಟಿಕೆಯನ್ನು ವಿದ್ಯಾರ್ಥಿಗಳು ನಡೆಸಿದರು. ಅಲ್ಲದೆ ಪ್ರತಿ ಚಟುವಟಿಕೆಗಳಿಗೆ ಸಂಬಂದಧಿಸಿದ ಕಲಿಕಾ ಉತ್ಪನ್ನಗಳನ್ನು ತಯಾರಿಸಿದರು.
ಎರಡನೇ ದಿನ ಅಪರಹ್ನ ಜರಗಿದ ಕಲಿಕಾ ಉತ್ಪನ್ನಗಳ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಶತೆಯನ್ನು ಪ್ರಾಂಶುಪಾಲೆ ಮನೋರಮ ಕಿಣಿ ವಹಿಸಿದರು. ಮಂಜೇಶ್ವರ ಗಾಮ ಪಂಚಾಯತ್ ಸದಸ್ಯೆ ಸುಪ್ರೀಯ ಶೆಣೈ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಪ್ರೌಢ ಶಾಲಾ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಬಶೀರ್, ಮದರ್ ಪಿ.ಟಿ.ಎ ಅದ್ಯಕ್ಷೆ ಜಯಶ್ರೀ , ಹಿರಿಯ ಶಿಕ್ಷಕಿ ಕೃಷ್ಣಕುಮಾರಿ , ಸಿಬ್ಬಂದಿ ಒಕ್ಕೊಟದ ಕಾರ್ಯದರ್ಶಿ ಜಿ. ವಿರೇಶ್ವರ ಭಟ್ , ಮತ್ತಿತರು ಉಪಸ್ಥಿತರಿದ್ದರು, ವಿಜ್ಞಾನ ಶಿಕ್ಷಕರಾದ ಈಶ್ವರ ಕಿದೂರ್ ಸ್ವಾಗತಿಸಿದರು , ಯು.ಪಿ ವಿಭಾಗದ ಎಸ್.ಆರ್ ಜಿ ಸಂಚಾಲಕರಾದ ದಾಸಪ್ಪ ರೈ, ವಂದಿಸಿದರು. ಶಿಕ್ಷಕಿ ಉಷಕುಮಾರಿ ಸಮಗ್ರ ವರದಿಯನ್ನು ವಾಚಿಸಿದರು. ಶಿಕ್ಷಕ ಶಾಂತರಾಮ ಎಸ್ ಕಾರ್ಯಕ್ರಮ ನಿರೂಪಿಸಿದರು.
                   

Sunday, 18 December 2016

ಮಂಜೇಶ್ವರ ಉಪ ಜಿಲ್ಲೆಯ ಕಲೋತ್ಸವದಲ್ಲಿ ಯು.ಪಿ.ವಿಭಾಗದಲ್ಲಿ ಪೆನ್ಸಿಲ್ ಡ್ರೋಯಿಂಗ್ ಮತ್ತು ಜಲವರ್ಣದಲ್ಲಿ ಭೂಷಣ್ ಆರನೇ ತರಗತಿ ಪ್ರಥಮ ಎ.ಗ್ರೇಡ್‌ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ದ್ದಾನೆ ಇವನು 
ಕಡಂಬಾರಿನ ವಿಶಾಲಾಕ್ಷಿ ಮತ್ತು ನವೀನ ದಂಪತಿ ಪುತ್ರ .

Saturday, 17 December 2016

ಧರ್ಮತ್ತಡ್ಕದಲ್ಲಿ ನಡೆದ ಕಲೋತ್ಸವದಲ್ಲಿ ಭರತನಾಟ್ಯ,ಕೂಚುಪುಡಿ,ಮೋಹಿನಿಯಾಟಂ ನಲ್ಲಿ ಪ್ರಥಮ 'ಎ'ಗ್ರೇಡ್ ಗಳಿಸಿದ ಎಸ್.ಎ.ಟಿ.ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್2 ಸಯನ್ಸ್ವಿಭಾಗದ ವಿದ್ಯಾರ್ಥಿನಿಯಾದ ಅಕ್ಷತ ಯಂ.ಆರ್ . ಇವರು ರಾಜಶೇಖರ್ ರಾವ್ ಮೀನಾ ಪುತ್ರಿ ಹಾಗೂ  ಬಾಲಕೃಷ್ಣ ಮಂಜೇಶ್ವರ ಅವರ  ಶಿಷ್ಯೆ.

Thursday, 3 November 2016





ಮಂಜೇಶ್ವರ ನವಂಬರ್ 2ರಂದು ಎಸ್..ಟಿ.ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವು ಶಾಲಾ ವ್ಯವಸ್ಥಾಪಕರಾದ ದಿನೇಶ್ ಶೆಣೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಮನೋರಮ ಕಿಣಿ ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಬಶೀರ್ ಶುಭಾಶಂಸನೆಗೈದರು. ಶ್ರೀಮತಿ ಪ್ರತಿಭಾ ಕುನಲ್ ಅಡಕ್ ಅವರು ಶಾಲೆಗೆ ನೀಡಿದ ಕಂಪ್ಯೂಟರ್ ಗಳ ಹಸ್ತಾಂತರ ನಡೆಯಿತು. ನಂತರ ಬಹುಮಾನ ವಿತರಣಾ ಕಾಯ೯ಕ್ರಮ ನಡೆಯಿತು. . ಸಂಚಾಲಕರಾದ ನಾರಾಯಣ ಜಿ ಹೆಗಡೆಯವರು ಸ್ವಾಗತಿಸಿದರೆ ಸಿಬ್ಬಂದಿ ವಗ೯ದ ಕಾಯ೯ದಶಿ೯ ಜಿ. ವೀರೇಶ್ವರ ಭಟ್ ಕಾಯ೯ಕ್ರಮ ನಿರೂಪಿಸಿದರು. .ಶಾಲಾ ನಾಯಕಿ ವಂದಿಸಿದರು.


2022

  ಮಕ್ಕಳ ಪ್ರವೇಶೋತ್ಸವ ಜೂನ್ .1. ಎಸ್ ಎ ಟಿ ಶಾಲೆಯ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವ  ಬಹಳ ವಿಜೃಂಭಣೆಯಿಂದ ಜರುಗಿತು.